ಏಳು ಆಡುಗಳನ್ನು ಕಚ್ಚಿಕೊಂದ ನಾಯಿ

Update: 2017-07-10 15:27 GMT

ಮಂಜೇಶ್ವರ, ಜು.10: ಏಳು ಆಡುಗಳನ್ನು ನಾಯಿ ಕಚ್ಚಿಕೊಂದ ಸ್ಥಿತಿಯಲ್ಲಿ ಕಂಡುಬಂದಿದೆ. ಪತ್ವಾಡಿ ಕೋರಂಬಳ ನಿವಾಸಿ ಮುಹಮ್ಮದ್ ಎಂ.ಪಿ ಎಂಬವರ ಆಡುಗಳು ಭಾನುವಾರ ಮುಂಜಾನೆ ಸತ್ತುಬಿದ್ದ ಸ್ಥಿತಿಯಲ್ಲಿ ಕಂಡುಬಂದಿದೆ. ಆಡು ಕೂಗುವ ಸದ್ದುಕೇಳಿ ಮುಹಮ್ಮದ್ ಹೊರಗೆ ಬಂದು ನೋಡಿದಾಗ ಮೂರು ಆಡು ಮನೆಯ ಹಿಂಬದಿಯ ಶೆಡ್‌ನಲ್ಲೂ, 4 ಆಡುಗಳು ಹಿತ್ತಿಲಿನ ಅಲ್ಲಲ್ಲಿ ಸತ್ತು ಬಿದ್ದಿವೆ. ಇದೇ ಪರಿಸರದಲ್ಲಿ ಎರಡು ನಾಯಿಗಳು ಕಂಡುಬಂದಿದೆ. ನಾಯಿಕಚ್ಚಿ ಕೊಂದಿರಬೇಕೆಂದು ಮುಹಮ್ಮದ್ ತಿಳಿಸಿದ್ದಾರೆ.

 ಈ ಬಗ್ಗೆ ಗ್ರಾಮ ಕಚೇರಿಗೂ, ಪಶು ಆಸ್ಪತ್ರೆಗೂ ದೂರು ನೀಡಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News