×
Ad

ನನ್ನ ಬಳಿ ಶರತ್ ಹತ್ಯೆ ಪ್ರಕರಣದ ಕುರಿತು ಸ್ಫೋಟಕ ಮಾಹಿತಿ ಇದೆ: ರಾಜಶೇಖರಾನಂದ ಸ್ವಾಮೀಜಿ

Update: 2017-07-14 22:43 IST

ಮಂಗಳೂರು, ಜು. 14: ಆರೆಸ್ಸೆಸ್ಸ್ ಕಾರ್ಯಕರ್ತ ಶರತ್ ಹತ್ಯಾ ಪ್ರಕರಣದ ಹಿಂದಿರುವ ಪಿತೂರಿಗಳ ಕುರಿತಂತೆ ಸ್ಪೋಟಕ ಮಾಹಿತಿ ನನ್ನ ಬಳಿಯಲ್ಲಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ವಹಿಸಿದರೆ, ಅವರಿಗೆ ಎಲ್ಲವನ್ನೂ ನೀಡಲು ಸಿದ್ಧ ಎಂದು ಹಿಂದೂ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು ಶರತ್ ಹತ್ಯಾ ಪ್ರಕರಣ ಸೇರಿದಂತೆ ಹಿಂದೂ ಸಮುದಾಯದ ಮೇಲಿನ ದಾಳಿಗಳ ಕುರಿತಂತೆ ಸಮಗ್ರ ತನಿಖೆ ನಡೆಸಲು ರಾಷ್ಟ್ರೀಯ ತನಿಖಾದಳ (ಎನ್‌ಐಎ)ಕ್ಕೆ ಪ್ರಕರಣ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಹಿಂದೂಗಳ ಮೇಲೆ ದಬ್ಬಾಳಿಕೆ, ತುಷ್ಠೀಕರಣ ನೀತಿ ಅನುಸರಿಸುತ್ತಿದೆ. ಇದರಿಂದ ಕರಾವಳಿ ಭಯೋತ್ಪಾದಕರ ಅಡಗುದಾಣವಾಗುತ್ತಿದೆ. ಇದರಲ್ಲಿ ಕೋಮುವಾದ, ಭಯೋತ್ಪಾದನೆಯಲ್ಲದೆ ಜಿಹಾದಿ ತಂತ್ರ ಅಡಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ರಾಜ್ಯ ಸರಕಾರ ಹಿಂದೂಗಳ ಮೇಲೆ ದಬ್ಬಾಳಿಕೆ, ತುಷ್ಠೀಕರಣ ನೀತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಆರ್. ಶೆಟ್ಟಿ ಅಡ್ಯಾರ್‌ಪದವು, ಉಪಾಧ್ಯಕ್ಷರಾದ ಸುಶಾಂತ್ ಅಮೀನ್, ಶ್ರುತಿನ್ ಕಡೇಶಿವಾಲ್ಯ, ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಬರ್ಕೆ, ಸಂಘಟನಾ ಪ್ರಮುಖ್ ಗಣೇಶ್ ಕುಲಾಲ್ ಕೆದಿಲ, ಸಹಕಾರ್ಯದರ್ಶಿ ಪ್ರಶಾಂತ್ ಗುರುಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News