×
Ad

ಪನತ್ತಡಿ ಮೂಕುಟ್ಟಿಚ್ಚಾಲ್ ವಾಟರ್ ಶೆಡ್ , ಮಣ್ಣು ಜಲ ಸಂರಕ್ಷಣಾ ಯೋಜನೆಯ ಉದ್ಘಾಟನೆ

Update: 2017-07-14 23:00 IST

ಕಾಸರಗೋಡು, ಜು. 14:  ರಾಜ್ಯದಲ್ಲಿ 63 ಲಕ್ಷ ಕುಟುಂಬಗಳಿಗೆ ತರಕಾರಿ ಬೀಜ ಒದಗಿಸಲಾಗುವುದು ಎಂದು ಕೇರಳ ಕೃಷಿ ಸಚಿವ ವಿ.ಎಸ್. ಶಿವಕುಮಾರ್ ಹೇಳಿದರು.

ಅವರು ಶುಕ್ರವಾರ  ಕಾಸರಗೋಡಿನ ಪನತ್ತಡಿ  ಮೂಕುಟ್ಟಿಚ್ಚಾಲ್  ವಾಟರ್ ಶೆಡ್  ಮಣ್ಣು ಜಲ ಸಂರಕ್ಷಣಾ ಯೋಜನೆ ಉದ್ಘಾಟಿಸಿ ಮಾತನಾಡುತ್ತಿದ್ದರು.

ಈ ಬಾರಿಯ ಓಣಂ ಹಬ್ಬಕ್ಕೆ  ಸ್ವಂತ ರಾಜ್ಯದಲ್ಲಿ ಬೆಳೆಸಿದ ತರಕಾರಿ ಬಳಸುವಂತಾಗಬೇಕು. ಹೊರರಾಜ್ಯಗ ಳ ತರಕಾರಿ ಅವಲಂಬಿಸುವಂತಾಗಬಾರದು.  ಇದರಿಂದ 63 ಲಕ್ಷ  ಕುಟುಂಬಗಳಿಗೆ ತರಕಾರಿ ಬೀಜ ತಲಪಿಸುವ ಗುರಿ ಹೊಂದಿದೆ.  ಸ್ಥಳೀಯ ಸಂಸ್ಥೆ, ಕೃಷಿ ಇಲಾಖೆ , ಕುಟುಂಬಶ್ರೀ , ಸಾರ್ವಜನಿಕರ  ಸಹಕಾರ ಇದ್ದಲ್ಲಿ ತರಕಾರಿ ಬೆಳೆಯಲ್ಲೂ ಸ್ವಾವಲಂಬಿಯಾಗಲು  ಸಾಧ್ಯ ಎಂದು ಹೇಳಿದರು. 

ವಿಷಮುಕ್ತ ತರಕಾರಿ ಗುರಿ ಸರ್ಕಾರದ್ದಾಗಿತ್ತು . ಉತ್ತಮ ಕೃಷಿಕರಿಗೆ ಪಾರಿತೋಷಕ ನೀಡಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್  ಅಧ್ಯಕ್ಷತೆ   ವಹಿಸಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ  ಶಾಂತಮ್ಮ ಫಿಲಿಪ್ , ಜಿಲ್ಲಾ ಪಂಚಾಯತ್ ಸದಸ್ಯೆ  ಇ. ಪದ್ಮಾವತಿ,  ಪಂಚಾಯತ್  ಉಪಾಧ್ಯಕ್ಷ  ಹೇಮಾಂಬಿಕಾ,  ಎಂ.ಸಿ ಮಾಧವನ್ , ರಜನಿ ದೇವಿ , ಜೆಸ್ಟಿನ್ ಮೋಹನ್,  ಅಶೋಕ್ ಕುಮಾರ್  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News