ಅನಾರೋಗ್ಯ ಪೀಡಿತ ಮಗುವಿಗೆ 2 ಲಕ್ಷ ರೂಪಾಯಿ ಸಹಾಯಧನ ಹಸ್ತಾಂತರ

Update: 2017-07-16 14:51 GMT

ಮೂಡುಬಿದಿರೆ,ಜು.16: ಶಿರ್ತಾಡಿ ಪಡುಕೊಣಾಜೆಯ ಚರ್ಮರೋಗ ಪೀಡಿತ ಸುಪ್ರೀತ್ ಎಂಬ ಮಗುವಿಗೆ 2 ಲಕ್ಷ ಸಹಾಯಧನವನ್ನು ಜವನೆರ್ ಬೆದ್ರಸಂಘಟನೆಯ ಆಶ್ರಯ, ಹಿಂದು ಯುವ ಸೇವಾ ವಿಭಾಗ, ತುಳುನಾಡ ಪೊರ್ಲು ಸೇವಾ ಟ್ರಸ್ಟ್,ನವಚೈತನ್ಯ ಇದರ ಸಹಯೋಗದಲ್ಲಿ ಸಮಾಜಮಂದಿರದಲ್ಲಿ ಭಾನುವಾರ ಹಸ್ತಾಂತರಿಸಲಾಯಿತು. 

ಜವನೆರ್ ಬೆದ್ರ ದ ಅಮರ್ ಕೋಟೆ, ಹಿಂದು ಯುವ ಸೇವಾ ವಿಭಾಗದ ಪ್ರೇಮ್ ಪಾವೂರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನವೀನ್, ನವ ಚೈತನ್ಯ ತಂಡದ ಭರತ್ ವೇದಿಕೆಯಲ್ಲಿದ್ದರು. ಸುಪ್ರೀತ್ ಹೆತ್ತವರಾದ ರಾಜೇಶ್-ಅಮಿತಾ ದಂಪತಿ ಉಪಸ್ಥಿತರಿದ್ದರು. ಸುನಿಲ್ ಪಣಪಿಲ ಪ್ರಾಸ್ತಾವಿಕ ಮಾತನಾಡಿದರು. ಪ್ರೇಮ್ ತನ್ನ ಅನಿಸಿಕೆ ವ್ಯಕ್ತ ಪಡಿಸಿದರು. ಜವನೆರ್ ಬೆದ್ರದ ಸಂಚಾಲಕ ಅಮರ್ ಕೋಟೆ ಅಧ್ಯಕ್ಷೀಯ ಭಾಷಣ ಮಾಡಿದರು ಡಾ.ಅಮರ್ ದೀಪ್ ವಂದಿಸಿದರು. ಹರಿಪ್ರಸಾದ್ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News