ದನ ಕಳವು ಪ್ರಕರಣ : ಇಬ್ಬರು ಸೆರೆ
Update: 2017-07-16 22:38 IST
ಮಂಗಳೂರು, ಜು. 16: ದನ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಜ್ಪೆ ಠಾಣಾ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಅಡ್ಡೂರಿನ ನಿವಾಸಿಗಳಾದ ಮುಸ್ತಫಾ (23) ಮತ್ತು ಅಬ್ದುಲ್ ಮಜೀದ್ (27) ಬಂಧಿತ ಆರೋಪಿಗಳು.
ಕೆಲವು ದಿನಗಳ ಹಿಂದೆ ದನ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ರವಿವಾರ ಕಾರ್ಯಾಚರಣೆ ನಡೆಸಿದ ಬಜ್ಪೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.