ಸಹಪಾಠಿಗಳ ಹೊಡೆತದಿಂದ ಐದನೆ ತರಗತಿಯ ವಿದ್ಯಾರ್ಥಿ ಸಾವು

Update: 2017-07-17 11:59 GMT

ಹೊಸದಿಲ್ಲಿ,ಜು.17: ಸಹಪಾಠಿಗಳ ಹೊಡೆತದಿಂದಾಗಿ ಹನ್ನೊಂದು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಉತ್ತರದಿಲ್ಲಿಯ ರೋಹಿಣಿಯಲ್ಲಿ ಈ ಘಟನೆ ನಡೆದಿದ್ದು,ಐದನೆ ತರಗತಿಯ ವಿದ್ಯಾರ್ಥಿ ವಿಶಾಲ್ ಮೃತ ಬಾಲಕನಾಗಿದ್ದಾನೆ. ಕಳೆದ ಶುಕ್ರವಾರ ಕ್ಲುಲ್ಲಕ ವಿಷಯದಲ್ಲಿ ತರಗತಿಯಲ್ಲಿ ವಿಶಾಲ್ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳ ನಡುವೆ ಜಗಳವಾಗಿತ್ತು. ಅಂದು ಶಾಲೆಯಿಂದ ಮನೆಗೆ ಬಂದಿದ್ದ ವಿಶಾಲ್ ತಂದೆ ತಾಯಿಗೆ ಈ ವಿಷಯವನ್ನು ಹೇಳಿರಲಿಲ್ಲ. ಆದರೆ ಮರುದಿವಸ ಆತನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತು. ದಿಲ್ಲಿಯ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತೆ ರವಿವಾರ ವಿಶಾಲ್ ಮೃತಪಟ್ಟಿದ್ದಾನೆ.

ವಿಶಾಲ್‌ನ ದೇಹದಲ್ಲಿ ಎಲ್ಲಿಯೂ ಗಾಯವಾಗಿಲ್ಲ.ಆದರೆ ಆಂತರಿಕ ಅಂಗಾಂಗಗಳಿಗೆ ಹಾನಿಯಾಗಿದ್ದು ಸಾವಿಗೆ ಕಾರಣವೆಂದು ಪೊಲೀಸ್ ಆಯುಕ್ತರು ಹೇಳಿದರು.ವಿಶಾಲ್‌ನ ಹೆತ್ತವರು ನೀಡಿದ ದೂರಿನ ಮೇರೆಗೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News