ದ.ಕ.ಜಿಲ್ಲಾ ಡಿಡಿಪಿಐ ಶಿವರಾಮಯ್ಯ ನೇಮಕ

Update: 2017-07-17 13:36 GMT

ಮಂಗಳೂರು,ಜು.17: ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ವೈ.ಶಿವರಾಮಯ್ಯ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾಗಿ (ಡಿಡಿಪಿಐ) ನೇಮಕಗೊಂಡಿದ್ದಾರೆ.

ಹಾಲಿ ಡಿಡಿಪಿಐ ವಾಲ್ಟರ್ ಡಿಮೆಲ್ಲೊ ಅವರನ್ನು ಯಾದಗಿರಿ ಡಯೆಟ್ ಪ್ರಾಂಶುಪಾಲರಾಗಿ ವರ್ಗಾಯಿಸಲಾಗಿದೆ. ಸಿಟಿಎ ಉಪನ್ಯಾಸಕರಾದ ಶಿವಪ್ರಕಾಶ್‌ರನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಡಾ.ಕುಮಾರಸ್ವಾಮಿ ಅವರನ್ನು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಪುತ್ತೂರು ಬಿಇಒ ಶಶಿಧರ ಅವರನ್ನು ಶಿವಮೊಗ್ಗ ಡಯೆಟ್‌ನ ಹಿರಿಯ ಉಪನ್ಯಾಸಕರಾಗಿ ವರ್ಗಾಯಿಸಲಾಗಿದೆ. ಇವರ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಡಯೆಟ್‌ನ ಹಿರಿಯ ಉಪನ್ಯಾಸಕಿ ಸುಕನ್ಯಾ ನೇಮಕಗೊಂಡಿದ್ದಾರೆ.

ನೂತನ ಡಿಡಿಪಿಐ ಶಿವರಾಮಯ್ಯ ಅವರು ಮೂಲತಃ ಬೆಂಗಳೂರಿನ ಆನೇಕಲ್ ನಿವಾಸಿ. ಬೆಂಗಳೂರು ವಿವಿಯಲ್ಲಿ ಎಂಎ, ಎಂಎಡ್ ವ್ಯಾಸಂಗ ಪೂರೈಸಿದ ಬಳಿಕ 1994ರಲ್ಲಿ ಕೊಡಗಿನ ಶುಂಠಿಕೊಪ್ಪಸರಕಾರಿ ಪ್ರೌಢಶಾಲೆಯ ಮುಖ್ಯಗುರು ಆಗಿದ್ದರು. ಬಳಿಕ ಕೊಡಗು ಡಯೆಟ್ ಉಪನ್ಯಾಸಕರಾಗಿದ್ದರು. ನಂತರ ಸೋಮವಾರಪೇಟೆ, ಪುತ್ತೂರು ಮತ್ತು ಮಂಗಳೂರು ನಗರ ಬಿಇಒ ಆಗಿದ್ದರು. ಪುತ್ತೂರು ತಾಪಂ ಇಒ ಅಗಿದ್ದರು. ದ.ಕ.ಜಿಪಂ ಸಹಾಯಕ ಕಾರ್ಯದರ್ಶಿಯಾಗಿ, ಮಾಧ್ಯಮಿಕ ಶಿಕ್ಷಣ ಅಭಿಯಾನದ ಸಹ ಸಂಯೋಜಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News