ವಿಷ ಚಿಕಿತ್ಸೆಯ ಕುರಿತು ಉಪನ್ಯಾಸ

Update: 2017-07-18 13:23 GMT

ಉಡುಪಿ, ಜು.18: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನಲ್ಲಿ ಇತ್ತೀಚೆಗೆ ವಿಷ ಚಿಕಿತ್ಸೆಯ ಕುರಿತು ಉಪನ್ಯಾಸ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು.

ಕೇರಳ ಕಣ್ಣೂರಿನ ಖ್ಯಾತ ವಿಷ ಚಿಕಿತ್ಸಾ ವೈದ್ಯ ಡಾ.ಬಿ.ಪ್ರಭಾಕರ ಸರ್ಪ, ವೃಶ್ಚಿಕಾದಿ ದಂಶದಿಂದ ಉಂಟಾದ ವಿಷಾಕ್ತತತೆ ಮತ್ತು ಅದರ ಚಿಕಿತ್ಸೆಯ ಬಗ್ಗೆ ಉಪನ್ಯಾಸವನ್ನು ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಶ್ರೀಕಾಂತ್ ಯು. ವಹಿಸಿದ್ದರು.

ಅಗದ ತಂತ್ರ ವಿಭಾಗದ ಮುಖ್ಯಸ್ಥ ಡಾ.ಯು.ಎನ್.ಪ್ರಸಾದ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಸುಧೀಂದ್ರ ಹೊನವಾಡ ವಂದಿಸಿದರು. ಡಾ. ಶ್ರೀನಿಧಿ ಆರ್. ಮತ್ತು ಡಾ.ಅಮಲಜ್ಯೋತಿ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News