ವರದಕ್ಷಿಣೆ ಕಿರುಕುಳ: ಆರೋಪ
Update: 2017-07-18 17:28 GMT
ಕೊಣಾಜೆ, ಜು.18: ಪತಿ, ಆತನ ತಾಯಿ ಹಾಗೂ ಸಂಬಂಧಿಕನೋರ್ವ ಸೇರಿಕೊಂಡು ಹೆಚ್ಚುವರಿ ವರದಕ್ಷಿಣೆ ನೀಡಬೇಕೆಂದು ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ದೇರಳಕಟ್ಟೆಯ ಬೆಳ್ಮ ನಿವಾಸಿ ಜಯರಾಜ್ (28), ಆತನ ತಾಯಿ ಪ್ರೇಮ (57) ಹಾಗೂ ಸಂಬಂಧಿ ಬೆಳ್ತಂಗಡಿ ಕಲ್ಮಂಜ ಗ್ರಾಮದ ಪ್ರವೀಣ್ (45) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.