×
Ad

ಮಾಯಾವತಿ ರಾಜೀನಾಮೆ ಅಂಗೀಕಾರ

Update: 2017-07-20 19:10 IST

ಹೊಸದಿಲ್ಲಿ, ಜು.20: ಬಿಎಸ್ಪಿ ನಾಯಕಿ ಮಾಯಾವತಿ ರಾಜ್ಯಸಭೆಗೆ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ರಾಜ್ಯಸಭೆಯ ಸಭಾಪತಿ ಹಾಮಿದ್ ಅನ್ಸಾರಿ ತಿಳಿಸಿದ್ದಾರೆ.

ದಲಿತರ ವಿರುದ್ಧ ಉತ್ತರಪ್ರದೇಶದಲ್ಲಿ ದೌರ್ಜನ್ಯ ನಡೆಯುತ್ತಿದ್ದು ಈ ಬಗ್ಗೆ ತನಗೆ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ಆಕ್ರೋಶಗೊಂಡಿದ್ದ ಮಾಯಾವತಿ, ರಾಜೀನಾಮೆ ನೀಡುವುದಾಗಿ ಮಂಗಳವಾರ ಘೋಷಿಸಿ ಸದನದಿಂದ ಹೊರ ನಡೆದಿದ್ದರು.

   ನನ್ನ ಹೇಳಿಕೆಯನ್ನು ಪ್ರಸ್ತುತಪಡಿಸಲು ಆಳುವ ಪಕ್ಷದವರು ಅವಕಾಶ ನೀಡದಿರುವುದು ೆ ನನ್ನ ರಾಜೀನಾಮೆಯನ್ನು ಸಮರ್ಥಿಸಿದಂತಾಗಿದೆ ಎಂದು ಮಾಯಾವತಿ ತಿಳಿಸಿದ್ದಾರೆ. ಉಪ ಸಭಾಪತಿ ಪಕ್ಷಪಾತ ತೋರಿದ್ದಾರೆ ಎಂದು ಆರೋಪಿಸಿದ ಅವರು, ಆಳುವ ಪಕ್ಷದ ಸದಸ್ಯರಿಗೆ ಸುಮ್ಮನಿರುವಂತೆ ಸೂಚಿಸುವ ಬದಲು ಅವರು ಬೆಲ್ ಬಾರಿಸಿ ನನಗೆ ಮಾತು ಮುಗಿಸಿ ಕುಳಿತುಕೊಳ್ಳಲು ತಿಳಿಸಿದರು ಎಂದು ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News