ಮನೆಗೆ ಹಾನಿ: ಖಾದರ್ ಭೇಟಿ
Update: 2017-07-20 17:53 GMT
ಮಂಗಳೂರು, ಜು. 20: ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಉಳ್ಳಾಲ ಒಂಬತ್ತುಕೆರೆ ಅನಿಲಕಾಂಪೌಂಡ್ ನಿವಾಸಿ ಮುಹಮ್ಮದ್ ಎಂಬವರ ಮನೆ ಹಾನಿಗೊಂಡಿದೆ. ತೀವ್ರ ಸುರಿದ ಮಳೆಯಿಂದಾಗಿ ಮನೆ ಧ್ವಂಸಗೊಂಡಿದ್ದು, ಹಾನಿ ಸಂಭವಿಸಿದೆ. ಕ್ಷೇತ್ರದ ಶಾಸಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು.