ಉಡುಪಿಗೆ ಕೆಎಸ್ಆರ್ಪಿ ಸೈಕಲ್ ಜಾಥಾ
Update: 2017-07-20 18:04 GMT
ಉಡುಪಿ, ಜು.20: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಜು.12ರಿಂದ 25ರವರೆಗೆ ಹಮ್ಮಿಕೊಂಡಿರುವ ಬೀದರ್ನಿಂದ ಬೆಂಗಳೂರಿಗೆ ಒಟ್ಟು 1754 ಕಿ.ಮೀ.ನ ಸೈಕಲ್ ಜಾಥಾ ಉಡುಪಿಗೆ ಆಗಮಿಸಲಿದೆ.
ಕೆಎಸ್ಆರ್ಪಿಯಲ್ಲಿ ಐಕ್ಯತೆ, ಕ್ರೀಡಾ ಮನೋಭಾವವನ್ನು ಹೆಚ್ಚಿಸುವುದಲ್ಲದೆ ರಾಜ್ಯದ ಅಖಂಡತೆ ಹಾಗೂ ಯಾಂತ್ರೀಕೇತರ ಸಾರಿಗೆ ಮಹತ್ವವನ್ನು ಪ್ರಚಾರ ಗೊಳಿಸುವ ಉದ್ದೇಶದಿಂದ ಈ ಸೈಕಲ್ ಜಾಥಾ ಕಾರ್ಯಕ್ರಮವ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ.
ಸೈಕಲ್ ಜಾಥಾ ಬೆಂಗಳೂರಿನ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ 60 ಮಂದಿ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡಿದೆ. ಅಪರಾಹ್ನ 12:00 ಗಂಟೆಗೆ ಉಡುಪಿಗೆ ಆಗಮಿಸುವ ಈ ತಂಡಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಆರ್ಪಿ 7ನೇ ಪಡೆಯ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.