ರೋಟರಿ ಉದ್ಯಾವರ ಪದಗ್ರಹಣ

Update: 2017-07-21 15:14 GMT

ಉಡುಪಿ, ಜು.21: ಉದ್ಯಾವರ ರೋಟರಿ ಕ್ಲಬ್ 2017-18ನೆ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಉದ್ಯಾವರದ ಸೌಂದರ್ಯ ಸಭಾಂಗಣದಲ್ಲಿ ಜರಗಿತು.

 ವಲಯ 3ರ ರೋಟರಿ ಅಸಿಸ್ಟೆಂಟ್ ಗವರ್ನರ್ ಮೋಹನದಾಸ ಪೈ ಬಿ. ನೂತನ ಅಧ್ಯಕ್ಷ ತೇಜೇಶ್ವರ ರಾವ್ ಹಾಗೂ ಕಾರ್ಯದರ್ಶಿ ರಾಜೇಶ್ ಡಿ. ಪಾಲನ್ ಹಾಗೂ ಇತರ ಪದಾಧಿಕಾರಿಗಳಿಗೆ ಪದಪ್ರದಾನ ನೆರವೇರಿಸಿದರು.
ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಠ ಮದ್ದೋಡಿ, ವಲಯ ಪ್ರತಿನಿಧಿ ಡಾ. ಪ್ರಭಾಕರ ಮಲ್ಯ, ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ, ನಿಕಟಪೂರ್ವ ವಲಯ ಪ್ರತಿನಿಧಿ ಜಗದೀಶ್ ಕಾಮತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮದ ಮೂರು ಪ್ರೌಢಶಾಲೆ ಮತ್ತು ಒಂದು ಪದವಿ ಶಾಲೆಯ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಒಟ್ಟು ಎಂಟು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಸಮವಸ್ತ್ರ ನೀಡಲಾಯಿತು.

ನಿರ್ಗಮನ ಅಧ್ಯಕ್ಷ ವಸಂತ ಕೋಟ್ಯಾನ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸುಂದರ ಎ.ಬಂಗೇರ ವರದಿ ವಾಚಿಸಿದರು. ರಾಜೇಶ್ ಪಾಲನ್ ವಂದಿಸಿದರು. ಆನಂದ್ ಉದ್ಯಾವರ್ ಮತ್ತು ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News