ಉಪ್ಪಳ: ಕಡಲ ದಡದಲ್ಲಿ ಮೃತದೇಹ ಪತ್ತೆ

Update: 2017-07-22 17:47 GMT

ಮಂಜೇಶ್ವರ, ಜು. 22: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಬಿಜೆಪಿ ನೇತಾರ, ಮಂಗಳೂರು ಬೋಳಾರ ನಿವಾಸಿ ಮನೋಜ್ (44) ಎಂಬವರ ಮೃತದೇಹ ಉಪ್ಪಳ ಹನುಮಾನ್ ನಗರದ ಸಮುದ್ರ ಕಿನಾರೆಯಲ್ಲಿ ಶುಕ್ರವಾರ ರಾತ್ರಿ ಪತ್ತೆಯಾಗಿದೆ.

ಮೃತದೇಹ ಸಮುದ್ರದಡದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದು, ಬಳಿಕ ಮಂಗಳೂರು ಠಾಣೆಗೆ ಮಾಹಿತಿ ರವಾನಿಸಲಾಗಿತ್ತು. ಇದರಂತೆ ಮಂಗಳೂರಿನಿಂದ ಶನಿವಾರ ಬೆಳಗ್ಗೆ ಆಗಮಿಸಿದ ಮನೋಜ್‌ರ ಸಂಬಂಧಿಕರು ಮೃತದೇಹದ ಗುರುತು ಪತ್ತೆಹಚ್ಚಿದ್ದಾರೆ.

ಬೋಳಾರ ನಿವಾಸಿ ದಿ. ಲಕ್ಷ್ಮಣ ಶೆಟ್ಟಿ-ದಿ. ಕಮಲಾ ದಂಪತಿಯ ಪುತ್ರನಾದ ಇವರು ಗುರುವಾರ ಮನೆಯಿಂದ ತೆರಳಿ ಬಳಿಕ ಹಿಂದಿರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡುತ್ತಿದ್ದ ಮಧ್ಯೆ ಉಪ್ಪಳ ಹನುಮಾನ್‌ನಗರ ಸಮದ್ರ ದಡದಲ್ಲಿ ಮೃತದೇಹ ಕಂಡುಬಂದ ಮಾಹಿತಿ ತಿಳಿದು ಮನೆಯವರು, ಸ್ನೇಹಿತರು ಉಪ್ಪಳಕ್ಕೆ ಆಗಮಿಸಿ ಗುರುತು ಪತ್ತೆಹಚ್ಚಿದ್ದಾರೆ.

ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತರು ಅವಿವಾಹಿತರಾಗಿದ್ದು, ಸಹೋದರ-ಸಹೋದರಿಯರ ಸಹಿತ ಅಪಾರ ಬಂಧು ವರ್ಗವವನ್ನು ಅಗಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News