ಸಾರ್ವಜನಿಕರಿಗೆ ಆಟಿ ಕಷಾಯ ವಿತರಣೆ

Update: 2017-07-23 10:59 GMT

ಕಾಪು, ಜು.23: ಆಟಿ ಅಮವಾಸ್ಯೆ ಪ್ರಯುಕ್ತ ಹಾಳೆ ಮರದ ತೊಗಟೆಯ ಕಷಾಯವನ್ನು ಕಾಪು ಸಮೀಪದ ಮೂಳೂರಿನ ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇಂದು ಬೆಳಗ್ಗೆ ಸಾರ್ವಜನಿಕರಿಗೆ ಮೂಳೂರು ಹಳೆ ಭಜನಾ ಮಂದಿರದಲ್ಲಿ ಉಚಿತವಾಗಿ ವಿತರಿಸಲಾಯಿತು.

ಹಿಂದೂ ರಕ್ಷಾ ವೆಲ್‌ಫೇರ್ ಟ್ರಸ್ಟ್ ಕಾರ್ಯದರ್ಶಿ ಧೀರೇಶ್ ಮೂಳೂರು ಮಾತನಾಡಿ, ನಾವು ಕಳೆದ ಎರಡು ವರ್ಷಗಳಿಂದ ಹಾಳೆ ಮರದ ತೊಗಟೆಯ ಕಷಾಯವನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ನಾವು ಹಮ್ಮಿ ಕೊಂಡಿದ್ದೇವೆ. ಈ ಕಷಾಯ ನಿರ್ಮಿಸಲು ನಮ್ಮ ಸಂಸ್ಥೆಯ ಸಂಜೀವ ಅಮೀನ್‌ರವರು ಸಹಕರಿಸಿದ್ದಾರೆ ಎಂದರು.

ಅಧ್ಯಕ್ಷ ಚಂದ್ರಕಾಂತ್ ಕೆ ಮೆಂಡನ್, ಸದಸ್ಯರಾದ ದಿನೇಶ್ ಪಾಣಾರ, ಮಧುಕಿರಣ್ ಶ್ರೀಯಾನ್, ಪ್ರತೀಕ್ ಸುವರ್ಣ, ಅರುಣ್ ಕುಲಾಲ್, ಅನೀಶ್ ಕಾಛನ್, ನಾಗೇಶ್ ನರೇಶ್, ಸುನೀಲ್ ಕರ್ಕೇರಾ, ಸುಜಯ ಪೂಜಾರಿ ಮತ್ತಿತರರು ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News