ಎಸ್ ವೈ ಎಸ್ ಪಾಳ್ಯತ್ತಡ್ಕ ಶಾಖೆಯ ಪದಾಧಿಕಾರಿಗಳ ಆಯ್ಕೆ

Update: 2017-07-23 15:30 GMT

ಪುತ್ತೂರು,ಜು.23 : ಕರ್ನಾಟಕ ರಾಜ್ಯ  ಸುನ್ನಿ ಯುವಜನ ಸಂಘ (ಎಸ್ ವೈ ಎಸ್)   ಪಾಳ್ಯತ್ತಡ್ಕ  ಶಾಖೆ ಇದರ ಮಹಾಸಭೆಯು ಈಶ್ವರಮಂಗಲ ತ್ವೈಬ ವಿಧ್ಯಾ ಸಂಸ್ಥೆಯಲ್ಲಿ ನಡೆಯಿತು.

ಸಮಾರಂಭವನ್ನು  ತ್ವೈಬ ಅದ್ಯಕ್ಷ ಹಂಝ ಮುಸ್ಲಿಯಾರ್ ಉದ್ಘಾಟಿಸಿದರು.  ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ  ವಿಷಯ ಮಂಡಿಸಿದರು.

ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 ಅದ್ಯಕ್ಷರು - ಅಬ್ದುಲ್ಲತೀಫ್ ಮುಸ್ಲಿಯಾರ್,  ಉಪಾಧ್ಯಕ್ಷರು - ಇಬ್ರಾಹಿಂ ಸಅದಿ ಕನ್ನಡ್ಕ,ಹಸೈನಾರ್ ಕೆಎಂ ಮುಂಡ್ಯ, ಪ್ರಧಾನ ಕಾರ್ಯದರ್ಶಿ - ಅಬ್ದುರ್ರಝ್ಝಾಖ್ ಖಾಸಿಮಿ, ಜೊತೆ ಕಾರ್ಯದರ್ಶಿ - ಉಮರ್ ಸಅದಿ, ಅಶ್ರಫ್ ಸಅದಿ, ಕೊಶಾಧಿಕಾರಿ – ಕೆ.ಎಚ್ ಅಬ್ದುಲ್ಲ ಹಾಜಿ ಹಾಗೂ  ಅಬೂಬಕರ್ ಮುಸ್ಲಿಯಾರ್,ಹಸೈನಾರ್ ಹಾಜಿ,ಇಬ್ರಾಹಿಂ ಕನ್ನಡ್ಕ,ಅಬ್ದುಲ್ ಅಝೀಝ್ ಮಿಸ್ಬಾಹಿ, ಅಬ್ದುಲ್ ಖಾದರ್ ಹಾಜಿ ಪಿಎಂ,ಮುಹಮ್ಮದ್ ನೆಕ್ಕರೆ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ರಝಾಕ್ ಖಾಸಿಮಿ ಸ್ವಾಗತಿಸಿ ಉಮರ್ ಸಅದಿ  ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News