ಮಂಗಳೂರಿನಿಂದ ಹೊರಟ ಹಜ್ ಯಾತ್ರಿಗಳ ಪ್ರಥಮ ತಂಡ

Update: 2017-07-24 12:08 GMT

ಮಂಗಳೂರು, ಜು. 24: ದ.ಕ., ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ 79 ಪುರುಷ ಮತ್ತು 80 ಮಹಿಳೆ ಸಹಿತ 159 ಮಂದಿಯನ್ನೊಳ ಗೊಂಡ ಹಜ್ ಯಾತ್ರಾರ್ಥಿಗಳ ತಂಡವು ಇಂದು ಅಪರಾಹ್ನ 2:15ಕ್ಕೆ ಬಜ್ಪೆ ಅನ್ಸಾರ್ ಶಾಲೆಯ ಮೈದಾನದಿಂದ ಬಜ್ಪೆ ಕೆಂಜಾರು ವಿಮಾನ ನಿಲ್ದಾಣಕ್ಕೆ ಬಸ್‌ನಲ್ಲಿ ಪ್ರಯಾಣ ಬೆಳೆಸಿತು.

ಶಾಸಕ ಬಿ.ಎ. ಮೊಯ್ದಿನ್ ಬಾವಾ ಈ ತಂಡಕ್ಕೆ ಹಸಿರು ನಿಶಾನೆ ತೋರಿದರು. ಪ್ರಥಮ ತಂಡವು ಏರ್ ಇಂಡಿಯಾ ಮೂಲಕ ಸಂಜೆ 4:25ಕ್ಕೆ ಬಜ್ಪೆ ವಿಮಾನ ನಿಲ್ದಾಣದಿಂದ ನೇರ ಮದೀನಾಕ್ಕೆ ಪ್ರಯಾಣ ಬೆಳೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News