ಕುಂಬಳೆ: ಯೂತ್ ಕಾಂಗ್ರೆಸ್ ನಿಂದ ಯುವ ಮೈತ್ರಿ ಸಂಗಮ

Update: 2017-07-24 13:08 GMT

ಮಂಜೇಶ್ವರ, ಜು. 24: ಕೋಮುವಾದ ಹಾಗೂ ಫಾಶಿಸಂ ವಿರುದ್ಧ ಯೂತ್ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಿತಿಯ ನೇತೃತ್ವದಲ್ಲಿ ಕುಂಬಳೆಯಲ್ಲಿ ಯುವ ಮೈತ್ರಿ ಸಂಗಮ ನಡೆಯಿತು.

ಸಂಗಮವನ್ನು ಯುವ ಶಾಸಕ ವಿ.ಟಿ ಬಲರಾಂ ಉದ್ಗಾಟಿಸಿದರು. ದೇಶದಲ್ಲಿ ಕೋಮುವಾದ ಹಾಗೂ ಫಾಶಿಸಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ದೇಶಕ್ಕೆ ಅಪಾಯಕಾರಿ. ಇದರ ವಿರುದ್ಧ ಯುವ ಜನತೆ ಜಾಗೃತರಾಗಿರಬೇಕೆಂದರು. ಬ್ಲಾಕ್ ಸಮಿತಿಯ ಅಧ್ಯಕ್ಷ ನಾಸಿರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಕ್ಕೀಂ ಕುನ್ನಿಲ್, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಜಿದ್ ಮೊವ್ವಲ್, ಕಾರ್ಯದರ್ಶಿ ಶ್ರೀಜಿತ್ ಮಾಡಕ್ಕಲ್ , ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗಳಾದ ಸೋಮಶೇಖರ್ ಶೇಣಿ, ಸುಂದರ ಆರಿಕ್ಕಾಡಿ, ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷರುಗಳಾದ ಉಮ್ಮರ್ ಬೋರ್ಕಳ, ಸಾಮಿ ಕುಟ್ಟಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಖಂಡರುಗಳಾದ ಗಣೇಶ್ ಬಂಡಾರಿ, ಮಂಜುನಾಥ ಆಳ್ವ, ಸುಧಾಕರ್ ರೈ, ಸತ್ಯನ್.ಸಿ ಉಪ್ಪಳ, ಖಾದರ್ ಮಾನ್ಯ, ನೌಶಾದ್ ಕನ್ಯಪ್ಪಾಡಿ ಮೊದಲಾದವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News