×
Ad

ಸೇತುವೆಯಿಂದ ಹಾರಿ ಆತ್ಮಹತ್ಯೆ

Update: 2017-07-24 21:35 IST

ಉಡುಪಿ, ಜು.24: ಸಂತೆಕಟ್ಟೆ ಸಮೀಪದ ಕೆ.ಜಿ.ರೋಡ್ ಸೇತುವೆಯಿಂದ ವ್ಯಕ್ತಿಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ನೇಜಾರಿನ ರಾಜೀವ ನಗರದ ಜೆವಿಯರ್ ರೋಡ್ರಿಗಸ್ (63) ಎಂದು ಗುರುತಿಸಲಾಗಿದೆ.

ಅವರು ಇಂದು ಬೆಳಗ್ಗೆ 10:30ಕ್ಕೆ ಮನೆಯಿಂದ ಸಂತೆಕಟ್ಟೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಸಂಜೆ 5:30ರ ಸುಮಾರಿಗೆ ಅವರು ಕೆ.ಜಿ.ರೋಡ್ ಸೇತುವೆಯಿಂದ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News