ಸೇರಾಜೆ ಸೀತಾರಾಮ ಭಟ್ಟರ ಕೃತಿ ಆಯ್ಕೆ

Update: 2017-07-25 16:51 GMT

ಮಂಗಳೂರು, ಜು. 25: ಸೇರಾಜೆ ಸೀತಾರಾಮ ಭಟ್ಟರ ಕೃತಿ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಬಹುಮಾನಕ್ಕೆ ಆಯ್ಕೆಯಾಗಿದೆ.

ಭಟ್ಟರ ‘ಯಕ್ಷಗಾನ ಪ್ರಸಂಗ ಪಂಚಕ’ ಕೃತಿಯು ಕರ್ನಾಟಕದ ಯಕ್ಷಗಾನ ಬಯಲಾಟ ಅಕಾಡೆಮಿಯು ಕೊಡಮಾಡುವ2014ನೆ ಸಾಲಿನ ಪುಸತಿಕ ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

 ಅಗಸ್ಟ್ 5ರಂದು ಬಾಗಲಕೋಟೆಯಲ್ಲಿ ಅಂಬೇಡ್ಕರ್ ಸಭಾಭವನದಲ್ಲಿ ಜರಗುವ ಸಮಾರಂಭದಲ್ಲಿ ನಗದು ಸಹಿತ ಪ್ರಸ್ತಿ ಪತ್ರದೊಂದಿಗೆ ಸೀತಾರಾಮ ಭಟ್ಟರನ್ನು ಗೌರಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News