ಗಡಿ ಬಿಕ್ಕಟ್ಟಿಗೆ ಭಾರತ ಕಾರಣ: ಚೀನಾ ವಿದೇಶ ಸಚಿವ

Update: 2017-07-25 17:08 GMT

ಬೀಜಿಂಗ್, ಜು. 25: ಭಾರತ ಮತ್ತು ಚೀನಾಗಳ ನಡುವಿನ ಸಿಕ್ಕಿಂ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಭಾರತವೇ ಕಾರಣ ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಹೇಳಿದ್ದಾರೆ. ಬಿಕ್ಕಟ್ಟು ನಿವಾರಣೆಗೆ ತನ್ನ ಗಡಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಅವರು ಭಾರತಕ್ಕೆ ಕರೆ ನೀಡಿದ್ದಾರೆ.

ಚೀನಾ ಸೈನಿಕರು ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿಲ್ಲ ಎಂಬುದನ್ನು ಭಾರತೀಯ ಅಧಿಕಾರಿಗಳು ‘ಒಪ್ಪಿಕೊಂಡಿದ್ದಾರೆ’ ಎಂದು ವಾಂಗ್ ಥಾಯ್ಲೆಂಡ್‌ನಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ ಎಂದು ವಿದೇಶ ಸಚಿವಾಲಯ ಚೀನಿ ಭಾಷೆಯಲ್ಲಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News