ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ನಿಧನ : ವೀರೇಂದ್ರ ಹೆಗ್ಗಡೆ ಸಂತಾಪ

Update: 2017-07-27 14:52 GMT

ಧರ್ಮಸ್ಥಳ,ಜು.27: ಧರಂ ಸಿಂಗ್ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಸ್ಮರಣೀಯವಾದ ಉತ್ತಮ ಆಡಳಿತವನ್ನು ಕೊಟ್ಟಿದ್ದರು. ಸಾತ್ವಿಕ ವ್ಯಕ್ತಿಯಾದ ಅವರು ಬಹಳ ತಾಳ್ಮೆ, ಸಹನೆಯಿಂದ ಸೂಕ್ತ ತೀರ್ಮಾನ ಕೈಗೊಂಡು ಯಶಸ್ವಿ ಆಡಳಿತ ನಡೆಸಿದ್ದಾರೆ.

ಧರ್ಮಸ್ಥಳದ ಬಗ್ಗೆ ಅವರಿಗೆ ಅಪಾರ ಭಕ್ತಿ, ಗೌರವ ಇದ್ದು ಆತ್ಮೀಯರಾಗಿದ್ದರು ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಧರಂ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News