ಉಪ್ಪಳ: ರೈಲು ನಿಲ್ದಾಣದಲ್ಲಿ ಮೃತದೇಹ ಪತ್ತೆ

Update: 2017-07-28 14:00 GMT

ಮಂಜೇಶ್ವರ, ಜು. 28: ಪತ್ನಿಯೊಂದಿಗೆ ಚಿಕಿತ್ಸೆಗೆಂದು ಮಂಗಳೂರಿಗೆ ಹೋಗಿದ್ದ ಕಣ್ಣೂರು ನಿವಾಸಿಯೋರ್ವರ ಮೃತದೇಹ ಉಪ್ಪಳ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದೆ. 

ಕಣ್ಣೂರು ಚೆರುಕುನ್ನ್ ನಿವಾಸಿ, ವಿದ್ಯುತ್ ಇಲಾಖೆಯ ಉದ್ಯೋಗಿ ಅನಿಲ್ ಕುಮಾರ್ (53) ಮೃತರು ಎಂದು ಗುರುತಿಸಲಾಗಿದೆ. ಕಳೆದ ದಿನ ಬೆಳಗ್ಗೆ ಪತ್ನಿ ಹಾಗೂ ಸಹೋದರನೊಂದಿಗೆ ಮಂಗಳೂರಿನ ಆಸ್ಪತ್ರೆಗೆಂದು ತೆರಳಿದ್ದರು. ವೈದ್ಯರನ್ನು ಕಂಡ ಬಳಿಕ ಸಹೋದರ ಚೆನ್ನೈ ತೆರಳಿದ್ದು, ಅನಿಲ್ ಕುಮಾರ್ ಹಾಗೂ ಪತ್ನಿ ರಾತ್ರಿ ಕಣ್ಣೂರಿಗೆ ರೈಲಿನಲ್ಲಿ ಹಿಂದಿರುಗಿದ್ದರು. ಅನಿಲ್ ಕುಮಾರ್ ಶೌಚಾಲಯಕ್ಕೆಂದು ಪತ್ನಿಯಲ್ಲಿ ಹೇಳಿ ತೆರಳಿದ್ದು, ರೈಲು ಕಾಞಂಗಾಡು ತಲುಪಿದರೂ ಅನಿಲ್ ಕುಮಾರ್ ಮರಳದ ಹಿನ್ನೆಲೆಯಲ್ಲಿ ಪತ್ನಿ ಹುಡುಕಾಡಿ ನಂತರ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಇದರಂತೆ ರೈಲ್ವೆ ಪೊಲೀಸರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಇಂದು ಬೆಳಗ್ಗೆ ಅನಿಲ್ ಕುಮಾರ್ ಮೃತದೇಹ ಉಪ್ಪಳ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News