×
Ad

ಕಾವ್ಯಾಳ ಅಸಹಜ ಸಾವಿನ ತನಿಖೆಗೆ ಸಿಪಿಐ ಒತ್ತಾಯ

Update: 2017-07-30 18:48 IST

ಮಂಗಳೂರು, ಜು.30: ಪ್ರತಿಭಾವಂತೆ, ರಾಷ್ಟ್ರೀಯ ಕ್ರೀಡಾಪಟು, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾಳ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಯ ಮಂಗಳೂರು ತಾಲೂಕು ಸಮಿತಿ ಕಾರ್ಯದರ್ಶಿ ವಿ.ಎಸ್. ಬೇರಿಂಜ ತಿಳಿಸಿದ್ದಾರೆ.

ಕಾವ್ಯಾ ಜು. 20ರಂದು ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಸೀರೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿರುವುದಾಗಿ ಶಿಕ್ಷಣ ಸಂಸ್ಥೆ ತಿಳಿಸಿದೆ. ಆದರೆ ತನ್ನ ಮಗಳು ಮಾನಸಿಕ ಧೃಢತೆ ಇರುವವಳಾಗಿದ್ದು ಈ ರೀತಿ ಮಾಡುವವಳಲ್ಲ. ನಮಗೆ ಮೃತ ದೇಹವನ್ನು ನೋಡಲು ಬಿಡಲಿಲ್ಲ. ಆಗಾಗಲೇ ಮೃತದೇಹವನ್ನು ಶವಾಗಾರದಲ್ಲಿ ಇಡಲಾಗಿತ್ತು. ಹಾಗೂ ನಮ್ಮೆಂದಿಗೆ ಶಿಕ್ಷಣ ಸಂಸ್ಥೆಯ ಅಧಿಕೃತರು ಸಹಜವಾಗಿ ಬೆರೆಯಲಿಲ್ಲ. ಇದು ಕೊಲೆ ಎಂದು ಮೃತಳ ಹೆತ್ತವರು ದೂರಿದ್ದಾರೆ. ಕಾವ್ಯಾ ಕೊಲೆಯಾಗಿದ್ದಾಳೆಂದು ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದವರು ತಿಳಿಸಿದರು.

ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಈ ಹಿಂದೆಯೂ ಇಂತಹ ಅಸಹಜ ಸಾವುಗಳಾದರೂ ಸತ್ಯ ಹೊರಬಂದಿಲ್ಲ. ತಮ್ಮದೇ ಆದ ಕಾನೂನುಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಳಾಗುತ್ತಿದೆ. ನಿಗದಿತ ಕೋರ್ಸ್‌ಗಳನ್ನು ನೀಡುವುದಾಗಿ ವಿದ್ಯಾರ್ಥಿಗಳನ್ನು ಅಕರ್ಷಿಸಿ ನಂತರ ಆ ಕೋರ್ಸ್‌ಗಳನ್ನು ಕೊಡದೆ, ಅವರಿಂದ ಪಡೆದ ಶುಲ್ಕ ಮತ್ತು ದೃಢೀಕರಣ ಪತ್ರಗಳನ್ನೂ ಹಿಂತಿರುಗಿಸದೆ ವಿದ್ಯಾರ್ಥಿಗಳನ್ನು ಹಿಂಸಿಸುತ್ತಿರುವ ಹಲವು ಪ್ರಕರಣಗಳು ಬಹಿರಂಗಗೊಳ್ಳುತ್ತಿಲ್ಲ ಎಂದು ಬೇರಿಂಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಈ ವಿದ್ಯಾ ಸಂಸ್ಥೆಯ ಬಗ್ಗೆ ಹಾಗೂ ಕಾವ್ಯಳಾ ಅಸಹಜ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News