​ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

Update: 2017-07-31 15:58 GMT

ಮಂಗಳೂರು, ಜು.31: ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಡಿ (ಪೆಥಾಲಜಿ) ವ್ಯಾಸಂಗ ಮಾಡುತ್ತಿದ್ದ ದಾವಣಗೆರೆ ಮೂಲದ ಎಚ್.ಕೆ. ಪ್ರಸಾದ್ (28) ಎಂಬವರು ಹಾಸ್ಟೆಲ್‌ನ ಕೋಣೆಯಲ್ಲಿ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸ್ಟೆಲ್‌ನ ಕೊಠಡಿಯಲ್ಲಿ ಒಬ್ಬನೇ ವಾಸ್ತವ್ಯ ಹೊಂದಿದ್ದು, ಶನಿವಾರ ಪ್ರಸಾದ್‌ನನ್ನು ಕೆಲವರು ನೋಡಿದ್ದಾರೆ. ರವಿವಾರ ಆತನ ಮನೆಯವರು ಕರೆ ಮಾಡಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಪ್ರಸಾದ್‌ನ ಮನೆಯವರು ಸೋಮವಾರ ಬೆಳಗ್ಗೆ ಕಾಲೇಜಿಗೆ ಕರೆ ಮಾಡಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಸಿಬ್ಬಂದಿ ಹಾಸ್ಟೆಲ್‌ನ ಕೋಣೆಗೆ ತೆರಳಿ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ.

ಪ್ರಸಾದ್ ಮಾನಸಿಕವಾಗಿ ಖಿನ್ನನಾಗಿದ್ದು, ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ರೂಮಿನಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ‘ನಾನು ಎಲ್ಲವನೂ ಬಿಟ್ಟು ಹೋಗುತ್ತಿದ್ದೇನೆ, ಯಮರಾಜ ನನನ್ನು ಕರೆಯುತ್ತಿದ್ದಾನೆ’ ಎಂದು ಬರೆದಿದ್ದಾನೆ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News