ಸುರತ್ಕಲ್ ಬಂಟರ ಸಂಘದಲ್ಲಿ ಆಟಿದ ಪೊರ್ಲು
ಸುರತ್ಕಲ್, ಆ.1: ಹಿಂದೆ ತುಳುನಾಡು ಸಾಂಸ್ಕೃತಿಕ, ಪ್ರಾಕೃತಿಕವಾಗಿ ಸಮೃದ್ಧವಾಗಿತ್ತು. ಇಂದಿನ ಕಾಲಘಟ್ಟದಲ್ಲಿ ತುಳು ಸಂಸ್ಕೃತಿಯ ಅನೇಕ ಅಂಶಗಳು ಮರೆತು ಹೋಗುತ್ತಿವೆ. ಆಟಿ ಆಚರಣೆ ಜತೆಗೆ ತುಳು ಸಂಸ್ಕೃತಿ ಯುವ ಪೀಳಿಗೆಗೆ ನೆನಪಿಸುವುದು ಅಗತ ಎಂದು ಜಾನಪದ ವಿದ್ವಾಂಸ ಡಾ. ಅಶೋಕ್ ಆಳ್ವ ಹೇಳಿದರು.
ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಆಶ್ರಯದಲ್ಲಿ ನಡೆದ ಆಟಿದ ಪೊರ್ಲು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಳು ಅಕಾಡಮಿ ಮಾಜಿ ಸದಸ್ಯೆ ರೂಪಕಲಾ ಆಳ್ವ ಮಾತನಾಡಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಬಂಟರ ಸಂಘ ಮಾಜಿ ಅಧ್ಯಕ್ಷ ಜಯ ಕೆ. ಶೆಟ್ಟಿ, ಉದ್ಯಮಿ ಜಯರಾಮ ಶೆಟ್ಟಿ ಮುಂಬೈ, ಬಂಟರ ಯಾನೆ ಮಾತೃ ಸಂಘದ ಕೋಶಾಧಿಕಾರಿ ರವೀಂದ್ರನಾಥ್ ಎಸ್. ಶೆಟ್ಟಿ, ಒಂದು ಮೊಟ್ಟೆಯ ಕಥೆ ಚಿತ್ರದ ನಾಯಕ ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ ತೋಕೂರು ಶುಭ ಹಾರೈಸಿದರು.
ಈ ಸಂದರ್ಭ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ನಾರಾಯಣ ಶೆಟ್ಟಿ ಕನಕಬೆಟ್ಟು ಸೂರಿಂಜೆ (ಕೃಷಿ), ಸುರೇಂದ್ರನಾಥ ಎನ್ ಶೆಟ್ಟಿ ಪೇಜಾವರ (ಶಿಕ್ಷಣ), ಶಿವ ಎಲ್. ಸುವರ್ಣ ಹೊಸಬೆಟ್ಟು (ಯಕ್ಷಗಾನ), ಉಮೇಶ್ ಇಡ್ಯಾ ( ಸ್ಯಾಕ್ಸೋಫೋನ್), ನಾಗಮ್ಮ ಪೂಜಾರ್ತಿ ಮಧ್ಯ(ಸೂಲಗಿತ್ತಿ) ರವರನ್ನು ಸನ್ಮಾನಿಸಲಾಯಿತು.
ಸುರತ್ಕಲ್ ಬಂಟರ ಸಂಘ ಉಪಾಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ, ಬಂಟರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷ ಚಂದ್ರಕಲಾ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಧರ್ ಶೆಟ್ಟಿ, ದೇವೇಂದ್ರ ಕೆ. ಶೆಟ್ಟಿ, ಕಿರಣ್ ಪ್ರಸಾದ್ ರೈ. ಭವ್ಯಾ ಅಶೋಕ್ ಶೆಟ್ಟಿ, ಭಾರತಿ ಪಿ. ಶೆಟ್ಟಿ ಪರಿಚಯಿಸಿದರು. ಜಯಭಾರತಿ ಎಸ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.