‘ಉಚಿತ ಇಲೆಕ್ಟ್ರಾನ್ ಸಿದ್ಧಾಂತ’ ಬಗ್ಗೆ ಉಪನ್ಯಾಸ

Update: 2017-08-04 12:21 GMT

ಉಡುಪಿ, ಆ.4: ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬಿಎಸ್ಸಿಯ ವಿದ್ಯಾರ್ಥಿಗಳಿಗೆ ‘ಉಚಿತ ಇಲೆಕ್ಟ್ರಾನ್ ಸಿದ್ಧಾಂತ’ ಎಂಬ ವಿಷಯದ ಕುರಿತು ಇತ್ತೀಚೆಗೆ ಉಪನ್ಯಾಸ ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಉಪನ್ಯಾಸಕಿ ಪ್ರೊ. ಅರ್ಚನಾ ಕೆ.ದಾಬಡೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ಕಾಲೇಜಿನ ಪ್ರಾಂಶು ಪಾಲ ಡಾ.ವಿನ್ಸೆಂಟ್ ಆಳ್ವ ವಹಿಸಿದ್ದರು. ತೃತೀಯ ಬಿಎಸ್ಸಿಯ ಆಶಿಕಾ ಸ್ವಾಗತಿಸಿ ದರು. ಭೌತಶಾಸ್ತ್ರದ ಉಪನ್ಯಾಸಕಿ ಅರೆಂರಝಾ ಸಿಕ್ವೇರಾ ವಂದಿಸಿದರು. ಕ್ರಿ ಸೆಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News