ಹಲ್ಲೆ ಪ್ರಕರಣ: ಆರೋಪಿಯ ಸೆರೆ

Update: 2017-08-10 16:02 GMT

ಪುತ್ತೂರು, ಆ. 10: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪುತ್ತೂರು ನಗರ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ನಿವಾಸಿ ಕುಸುಮ ಎಂಬವರ ಮನೆಗೆ 2013ರ ಅಕ್ಟೋಬರ್ 23ರಂದು 7 ಜನರಿದ್ದ ತಂಡ ಅಕ್ರಮ ಪ್ರವೇಶಗೈದು ಹಲ್ಲೆ ನಡೆಸಿರುವುದಾಗಿ ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಲಲಿತಾ ಎಂಬವರು ಸುಮಾರು 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ನ್ಯಾಯಾಲಯವು ಅವರ ಪತ್ತೆಗಾಗಿ ವಾರಂಟ್ ಜಾರಿ ಮಾಡಿತ್ತು. ಗುರುವಾರ ಪುತ್ತೂರು ನಗರಠಾಣಾ ಸಿಬ್ಬಂದಿ ಪರಮೇಶ್ವರ ಹಾಗು ಜಯರಾಮ ಅವರು ಪುತ್ತೂರು ತಾಲೂಕಿನ ಆಲಂಗಾರು ಗ್ರಾಮದ ನಡುಗುಡ್ಡೆ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News