ಜುಗಾರಿ ಅಡ್ಡೆಗೆ ದಾಳಿ; ಐವರ ಬಂಧನ

Update: 2017-08-12 16:00 GMT

ಪುತ್ತೂರು,ಆ.12;  ನಗರದ ಹೊರವಲಯದ ಕೆಮ್ಮಿಂಜೆ ಪುತ್ತೂರು ಮೂಲೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಶನಿವಾರ ಸಂಜೆ ದಾಳಿ ನಡೆಸಿದ ನಗರ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ.

ಶಾಂತಿಗೋಡು ಗ್ರಾಮ ಬೀರಮಂಗಲ ನಿವಾಸಿ ಮಹಾಬಲ ಶೆಟ್ಟಿ ಕುದ್ಮಾರು ಗ್ರಾಮದ ಬರೆಪ್ಪಾಡಿ ನಿವಾಸಿ ಗುರುವ, ಆರ್ಯಾಪು ಗ್ರಾಮದ ಅಶೋಕ್ , ಕೊಡಿಪ್ಪಾಡಿ ಗ್ರಾಮದ ಪಲ್ಲತ್ತಾರು ನಿವಾಸಿ ಸಿದ್ದೀಕ್, ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಸುನೀಲ್ ಬಂಧಿತ ಆರೋಪಿಗಳು.  

ಪುತ್ತೂರಮೂಲೆ ಎಂಬಲ್ಲಿ ಸುಮಾರು 12 ಮಂದಿಯ ತಂಡ ಜುಗಾರಿಯಲ್ಲಿ ನಿರತರಾಗಿದ್ದು, ದಾಳಿಯ ವೇಳೆ 5 ಮಂದಿ ಮಾತ್ರ ಬಂಧಿತರಾಗಿದ್ದಾರೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಜುಗಾರಿ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರಠಾಣೆಯ ಎಸೈ ಓಮಾನಾ  ನೇತೃತ್ವದಲ್ಲಿ ಕ್ರೈಂ ಎಸೈ ವೆಂಕಟೇಶ್ ಭಟ್, ಎಎಸೈ ಗಂಗಾಧರ್, ಹೆಡ್ ಕಾನ್ಸ್ ಟೇಬಲ್ ಗಳಾದ ರವಿ, ಹರೀಶ್, ಪ್ರಶಾಂತ್ ಶೆಟ್ಟಿ ಹಾಗೂ ಮಂಜುನಾಥ್ ಈ ಕಾರ್ಯಾಚರಣೆ ನಡೆಸಿದರು. ನಗರಠಾಣೆಯಲ್ಲಿ ಕೇಸು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News