ಶರತ್ ಹತ್ಯೆಗೆ ಬಾಂಬೆ ಸುಪಾರಿ; ಆರೋಪಿಗಳ ಸುಳಿವು ಲಭ್ಯ ?

Update: 2017-08-13 06:39 GMT

ಮಂಗಳೂರು, ಆ.13: ಆರೆಸ್ಸೆಸ್ ಕಾರ್ಯಕರ್ತ  ಶರತ್ ಮಡಿವಾಳ ಹತ್ಯೆಗೆ ಮುಂಬೈನಿಂದ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಶರತ್ ಹತ್ಯಾ ಪ್ರಕರಣಕ್ಕೆ  ಸಂಬಂಧಿಸಿ ತನಿಖೆ ನಡೆಸುತ್ತಿರುವ ಮಂಗಳೂರಿನ ಸಿಸಿಬಿ ತಂಡ ಮುಂಬೈನಿಂದ ವಾಪಸಾಗಿದ್ದು , ಹತ್ಯಾ ಪ್ರಕರಣದ ಆರೋಪಿಗಳ ಮಹತ್ವದ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.

ಆರೋಪಿಗಳು ಮುಂಬೈನಲ್ಲಿ ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ತನಿಖಾ ತಂಡ ಮುಂಬೈಗೆ ತೆರಳಿತ್ತು. ಶರತ್ ಹತ್ಯಾ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 4ರಂದು ರಾತ್ರಿ  ಲಾಂಡ್ರಿಯಲ್ಲಿ ಶರತ್ ಕೆಲಸ ನಿರತರಾಗಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಂಭೀರ ಗಾಯಗೊಂಡಿದ್ದ ಶರತ್  ಚಿಕಿತ್ಸೆ ಫಲಕಾರಿಯಾಗದೆ ಜುಲೈ 7ರಂದು ಕೊನೆಯುಸಿರೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News