ಪಶ್ಚಿಮ ವಾಹಿನಿ ಕುಡಿಯುವ ನೀರು ಯೋಜನೆಗೆ 40 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ : ಯು.ಟಿ.ಖಾದರ್

Update: 2017-08-13 13:33 GMT

ಮಂಗಳೂರು.ಆ,13:ಪಶ್ಚಿಮ ವಾಹಿನಿ ಕುಡಿಯುವ ನೀರು ಯೋಜನೆಗೆ 40 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಲಾಗಿದೆ .ಈ ಯೋಜನೆಯ ಪ್ರಕಾರ ಹರೇಕಳದಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ ಮೇಲೆ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕೆ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ. ಮಂಗಳೂರು ಬಳಿ ಸಮುದ್ರದಿಂದ 7 ಕಿ.ಮೀ ದೂರದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಕುಡಿಯಲು ಬಳಸುವ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಇದರಿಂದ ರಾಜ್ಯದ ಇತರ ಕಡೆಯ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಬಹುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ 2016-17ನೆ ಸಾಲಿನಲ್ಲಿ 3054ಯೋಜನೆಯಡಿ ಮಂಜೂರಾಗಿರುವ ವಿವಿಧ ಕಾಮಗಾರಿಗಳಿಗೆ 10ಕೋಟಿ ರೂ. ಅನುದಾನ ಮಂಜೂರಾಗಿದೆ.ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 20 ಕೋಟಿ ಯೋಜನೆ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಖ್ಯ ಮಂತ್ರಿಯ ಮೂಲಕ ವಿಶೇಷ ಅನುದಾನ ಬಿಡುಗಡೆಯಾಗಿದೆ ಇನ್ನೂ 10 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.

ವಿಕಾಸ ಗ್ರಾಮ ಯೋಜನೆಪ್ರಕಾರ ತಲಾ ಒಂದು ಕೋಟಿ ಅನುದಾನ ವಿನಿಯೋಗಿಸಲು ಹರೇಕಳ,ಕೊಣಾಜೆ ಹಾಗೂ ಬಂಟ್ವಾಳದ ಬಾಳೆಪುಣಿ,ಪಜೀರ್ ಆಯ್ಕೆಯಾಗಿದೆ.ನಿರಂತರ ವಿದ್ಯುತ್ ಪೂರೈಕೆ ಯೋಜನೆಗೆ ನರಿಮಗಾನ, ಸಜಿಪನಡು, ಮಂಜನಾಡಿ,ಕಿನ್ಯ,ಪಾವೂರು ಆಯ್ಕೆಯಾಗಿದೆ.ಇನ್ನೂ 5 ಗ್ರಾಮ ಆಯ್ಕೆಮಾಡಲಾಗುತ್ತದೆ ಮುಡಿಪು ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.ಇನ್ನೂ 2 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.

10 ಜನ ಅಮಿತ್ ಶಾ ಬಂದರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ : ಕರ್ನಾಟಕ ರಾಜ್ಯಕ್ಕೆ 10 ಅಮಿತ್‌ಶಾ ಬಂದರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಏನು ಮಾಡಲು ಮಾಡಲು ಸಾಧ್ಯವಿಲ್ಲ.ಸಿದ್ದರಾಮಯ್ಯ ನೇತೃತ್ವದ ಜನಪರ ಕಾರ್ಯಕ್ರಮಕ್ಕೆ ಜನರ ಬೆಂಬಲ ಇರುವವರೆಗೆ ಇಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಉಚಿತ ಶಿಕ್ಷಣ ನೀಡುವ ವಸತಿ ಶಾಲೆಗಳಿಗೆ ಸರಕಾರದಿಂದ ಉಚಿತವಾಗಿ ಅಕ್ಕಿ ವಿತರಣೆ: ರಾಜ್ಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವ ಎಲ್ಲಾ ವಸತಿ ಶಾಲೆಗಳಿಗೂ ಸರಕಾರ ತಲಾ ಒಬ್ಬನಿಗೆ ತಿಂಗಳಿಗೆ 15 ಕೆ.ಜಿ ಅಕ್ಕಿ ನೀಡುತ್ತದೆ.ಆರು ತಿಂಗಳ ಅಕ್ಕಿಯನ್ನು ಒಮ್ಮೆಲೆ ನೀಡಲಾಗುತ್ತದೆ.ಈ ಸೌಲಭ್ಯ ಸಿಗದೆ ಇರುವವರು ಅದಕ್ಕಾಗಿ ಅರ್ಜಿ ಸಲ್ಲಿಸಿ ಸರಕಾರದಿಂದ ಈ ಅನುದಾನವನ್ನು ಪಡೆದುಕೊಳ್ಳಬಹುದು.ಕಲ್ಲಡ್ಕ ಶಾಲೆಯೂ ಈ ಅರ್ಹತೆ ಹೊಂದಿದ್ದರೆ ಈ ಸಹಾಯ ಪಡೆದುಕೊಳ್ಳ ಬಹುದಿತ್ತು.ಧಾರ್ಮಿಕ ಪರಿಷತ್ ಕಲ್ಲಡ್ಕ ಶಾಲೆಗೆ ಅನುದಾನ ನಿಲ್ಲಿಸಿರುವುದಕ್ಕೂ ಸರಕಾರಕ್ಕೂ ಯಾವುದೇ ಸಂಬಂಧ ಇಲ್ಲ.ಅದು ಧಾರ್ಮಿಕ ಪರಿಷತ್‌ನ ತೀರ್ಮಾನ ಅದರಿಂದ ಶಾಲೆಗೆ ತೊಂದರೆಯಾಗಿದ್ದರೆ.ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಗಮನಕ್ಕೆ ತರಬೇಕಿತ್ತು.ಬದಲಾಗಿ ಮಕ್ಕಳನ್ನು ತಂದು ಪ್ರತಿಭಟನೆ ಮಾಡಿಸಲಾಗಿದೆ ಮುಖ್ಯ ಮಂತ್ರಿಯನ್ನು ಗುರಿಮಾಡಿ ಟೀಕಿಸುತ್ತಿರುವುದು ಸರಿಯಲ್ಲ .ನನ್ನ ವಿಧಾನ ಸಭಾ ಕ್ಷೇತ್ರದ ಮುಡಿಪು ಶಾಲೆಯ ಮಕ್ಕಳಿಗೂ ಈ ರೀತಿಯ ಅನುದಾನ ಧಾರ್ಮಿಕ ಪರಿಷತ್‌ನಿಂದ ನೀಡಬೇಕಾದ ಅಗತ್ಯವಿದೆ ನಾನು ಮನವಿ ಸಲ್ಲಿಸುತ್ತೇನೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 63 ಮಕ್ಕಳ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು: ಉತ್ತರ ಪ್ರದೇಶದಲ್ಲಿ 63 ಮಕ್ಕಳ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು.ಇದಕ್ಕೆ ಕಾರಣರಾಗಿರುವ ರಾಜ್ಯ ಸರಕಾರದ ಮುಖ್ಯ ಮಂತ್ರಿ,ಆರೋಗ್ಯ ಸಚಿವರು ರಾಜಿನಾಮೆ ನೀಡಬೇಕು.ರಾಷ್ಟ್ರೀಯ ಆರೋಗ್ಯ ಮಿಶನ್‌ನ ಮೂಲಕ ಅನುದಾನ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಇರುವ ಬಗ್ಗೆ ತನಿಖೆಯಾಗಬೇಕು.ಹಸು ಸತ್ತರೆ ಗೊಂದಲ ಎಬ್ಬಿಸುವವರು ಹಸುಳೆಗಳು ಸತ್ತಾಗ ಮೌನವಹಿಸಲು ಕಾರಣವೇನು ?ಎಂದು ಖಾದರ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News