ಬಂಟ್ವಾಳ : ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ
Update: 2017-08-13 14:02 GMT
ಬಂಟ್ವಾಳ,ಆ.13: ಪುರಸಭಾ ವ್ಯಾಪ್ತಿಯ ಕಲ್ಲಡ್ಕ ನರಹರಿ ನಗರದ ಬೊಂಡಾಲ ಕೋಡಿಯ ರಸ್ತೆಗೆ ಮುಖ್ಯ ಮಂತ್ರಿಯ ಅನುದಾನದಿಂದ 8ಲಕ್ಷ 75ಸಾವಿರ ವೆಚ್ಚದ ಕಾಂಕ್ರಿಟೀಕೃತ ರಸ್ತೆಯ ಉದ್ಘಾಟನೆಯನ್ನು ಅರಣ್ಯ,ಪರಿಸರ,ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಅರಣ್ಯ ಅಭಿವೃದ್ಧಿ ನಿಗಮ ನಿರ್ದೇಶಕ ಪರಮೇಶ್ವರ ಮೂಲ್ಯ, ಪುರಸಭಾ ಸದಸ್ಯರಾದ ಜೆಸಿಂತಾ, ಸಂಜೀವಿ, ಸಿದ್ದಿಕ್ ಗುಡ್ಡೆಯಂಗಡಿ, ಪ್ರಮುಖರಾದ ರ ಫೀಕ್, ಅಹ್ಮದ್ ಬಾವಾ, ಬಿ.ಕೆ.ಇದಿನಬ್ಬ, ರ ವೀಂದ್ರ ನಾಯಕ್, ಪ್ರಶಾಂತ್ ಪೂಜಾರಿ , ಪ್ರವೀಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.