ಹಕ್ಕುಪತ್ರ ವಿತರಣಾ ಕಾರ್ಯಕ್ರಮ
Update: 2017-08-13 14:15 GMT
ಬಂಟ್ವಾಳ,ಆ.13 : ಕಳ್ಳಿಗೆ ಗ್ರಾಮದ ತೊಡಂಬಿಲ ಹಿ.ಪ್ರಾ.ಶಾಲೆಯಲ್ಲಿ 94ಸಿಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಸದಸ್ಯ ದಿವಾಕರ ಪಂಬದಬೆಟ್ಟು, ತಾ.ಪಂ.ಸದಸ್ಯರಾದ ಶಿವಪ್ರಸಾದ್ ಕನಪಾಡಿ, ಮಲ್ಲಿಕಾ ಶೆಟ್ಟಿ, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್, ಗ್ರಾ.ಪಂ.ಸದಸ್ಯರಾದ ವಿಜಯ ಡಿಸೋಜ, ರಮೇಶ್ ಬಂಗೇರಾ, ವಿಮಲ, ಮಹೇಶ್, ಯಶೋಧ, ಸರಸ್ವತಿ, ರೇವತಿ, ಭಾಗೀರತಿ, ಕಂದಾಯ ನಿರೀಕ್ಷಕ ರಾಮ ಕೆ., ಪಂ.ಅಭಿವೃದ್ಧಿ ಅಧಿಕಾರಿ ರಾಜಶೇಖರ ಹುಲ್ಮನಿ, ಪ್ರಮುಖರಾದ ಓಲ್ವಿನ್ ಮೊಂತೆರೋ, ಲೀನಾ ಮೊಂತೆರೋ, ರವಿರಾಜ್ ಜೈನ್, ಸುರೇಖಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.