'ಯುದ್ದ: ಒಂದು ಉದ್ಯಮ' ಪಾಠವನ್ನು ಹಿಂದೆಗೆದುಕೊಳ್ಳಲು ತೀರ್ಮಾನ

Update: 2017-08-13 15:51 GMT

ಮಂಗಳೂರು,ಆ.13: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿ ಸಮಿತಿ ಸಭೆಯು ಶನಿವಾರ ನಡೆದಿದೆ. ಈ ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ 2017-18ರ ಶೈಕ್ಷಣಿಕ ವರ್ಷದ ಬಿಸಿಎ ಪದವಿಯ ಮೊದಲ ಚಾರ್ತುರ್ಮಾಸ ಕನ್ನಡ ಭಾಷಾ ಬೋಧನೆಯ `ಪದಚಿತ್ತಾರ' ಪಠ್ಯದ `ಯುದ್ದ ಒಂದು ಉದ್ಯಮ' ಈ ಪಾಠದ ಕುರಿತು ಮಾಜಿ ಸೈನಿಕರು ತೋರಿದ ವಿರೋಧದ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಾಲೋಚಿಸಿ ಈ ಪಾಠವನ್ನು ಹಿಂದೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಪ್ರಧಾನ ಸಂಪಾದಕ ಪ್ರೊ.ಶಿವರಾಮ ಶೆಟ್ಟಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News