×
Ad

​ಅಂದರ್ ಬಾಹರ್: ಏಳು ಮಂದಿ ಸೆರೆ

Update: 2017-08-15 21:43 IST

ಕುಂದಾಪುರ, ಆ.15: ಹಾಲಾಡಿ ಗ್ರಾಮದ ಹರವಿನಹಾಡಿ ಎಂಬಲ್ಲಿ ಆ.15 ರಂದು ನಸುಕಿನ ವೇಳೆ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಉಡುಪಿ ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹಾಲಾಡಿ ಜನತಾ ಕಾಲೋನಿಯ ಮಂಜುನಾಥ(34), ವಿಶ್ವನಾಥ(32), ಗೊರಾಜೆಯ ಗೋಪಾಲ(33), ನಾರಾಯಣ(35), ಹೈಕಾಡಿಯ ಜಯರಾಮ(35), ಹಾಲಾಡಿಯ ವಿಶ್ವನಾಥ(35), ರವಿ ಪೂಜಾರಿ(36) ಎಂದು ಗುರುತಿಸಲಾಗಿದೆ.

ಇವರಿಂದ 13,620ರೂ. ನಗದು ಮತ್ತು 3 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್(ಸೈಬರ್ ಇಕೋನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಮ್) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News