ಜುಗಾರಿ: 11 ಮಂದಿಯ ಬಂಧನ

Update: 2017-08-16 16:01 GMT

ಉಡುಪಿ, ಆ.16: ಜುಗಾರಿ ಆಟಕ್ಕೆ ಸಂಬಂಧಿಸಿ ಆ.15ರಂದು ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಒಟ್ಟು 11 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಟ್ಕಾ ಜುಗಾರಿಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ಮೀನು ಮಾರ್ಕೆಟ್ ಬಳಿ ಕೋಡಿಯ ಸುರೇಶ ಕಿಣಿ(52) ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಾಡಿ ಗ್ರಾಮದ ಭದ್ರಗಿರಿ ಎಂಬಲ್ಲಿ ಬೈಕಾಡಿಯ ಸುಧಾಕರ(49) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರ್ ಗ್ರಾಮದ ಜಗದಾಂಬ ದೇವಸ್ಥಾನದ ಹಿಂದುಗಡೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಡ ಗ್ರಾಮದ ಮಹಮ್ಮದ್(40), ಬಸವ(48), ಬಗ್ವಾಡಿಯ ದಿನಕರ(40) ಎಂಬವರನ್ನು ಪೊಲೀಸರು ಬಂಧಿಸಿ, 5,600ರೂ. ನಗದು ವಶಪಡಿಸಿಕೊಂಡಿದ್ದಾರೆ.
 ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಅರೆ ಶಿರೂರು ಗಾರ್ಡರ್‌ಶೆಡ್ ಎಂಬಲ್ಲಿ ಅಂದರ್‌ಬಾಹರ್ ಜುಗಾರಿ ಆಡುತ್ತಿದ್ದ ಕಂಬಳಗದ್ದೆಯ ಸಂದೇಶ್(26), ಜಗನ್ನಾಥ, ಅರೆಶಿರೂರಿನ ಸುಬ್ಬಯ್ಯ(34), ಮಂಜುನಾಥ(40), ಬಾಳೆಕೊಡ್ಲುವಿನ ಶೇಖರ(24), ಬೀದಿಕೇರಿಯ ಸುಹಾಸ್(25) ಎಂಬವರನ್ನು ಪೊಲೀಸರು ಬಂಧಿಸಿ, 1480ರೂ. ನಗದು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News