ತಡಂಬೈಲ್: ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2017-08-16 16:04 GMT

ಮಂಗಳೂರು, ಆ.16: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ತಡಂಬೈಲ್ ಸಮೀಪದ ಸದಾಶಿವ ನಗರ ಬಡಾವಣೆಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು 1.40 ಲಕ್ಷ ರೂ. ವೌಲ್ಯದ ಚಿನ್ನಾಭರಣ ಕಳವುಗೈದಿದ್ದಾರೆ. ಈ ಬಗ್ಗೆ ಮನೆಯ ಮಾಲಕಿ ಆಶಾ ಸುವರ್ಣ ಪೊಲೀಸರಿಗೆ ದೂರು ನೀಡಿದ್ದಾರೆ.

ಆ.15ರಂದು ರಾತ್ರಿ 11:30ಕ್ಕೆ ಆಶಾ ಸುವರ್ಣರ ಮನೆಯವರು ನಿದ್ರಿಸಿದ್ದು, ಆ.16ರಂದು ಬೆಳಗ್ಗೆ 6 ಗಂಟೆಗೆ ಎಚ್ಚರಗೊಂಡಾಗ ಮನೆಯ ಅಡುಗೆ ಕೋಣೆಯ ಬಾಗಿಲು ತೆರೆಯಲ್ಪಟ್ಟಿತ್ತು. ತಕ್ಷಣ ಎದ್ದು ಗಮನಿಸಿದಾಗ ಕೋಣೆಯ ಕಪಾಟಿನ ಬಾಗಿಲು ಕೂಡ ತೆರೆದಿರುವುದು ಕಂಡು ಬಂತು. ಬ್ಯಾಗ್‌ನಲ್ಲಿರಿಸಿದ್ದ 1 ಜೊತೆ ಮುತ್ತು ಇರುವ 24 ಗ್ರಾಂ ತೂಕದ ಬಳೆ, 24 ಗ್ರಾಂ ತೂಕದ ಒಂದು ಸಾಧಾರಣ ಬಳೆ, 16 ಗ್ರಾಂ ತೂಕದ 1 ಕಡಗವನ್ನು ಕಳ್ಳರು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News