ಸಿಂಗಾಪುರ ಕಂಪೆನಿಯಿಂದ ಭಾರತ ಮೂಲದ ವ್ಯಕ್ತಿಗೆ 29 ಲಕ್ಷ ರೂ. ನಷ್ಟ ಪರಿಹಾರ!

Update: 2017-08-17 10:50 GMT

ಸಿಂಗಾಪುರ,ಆ.17: ಭಾರತ ಮೂಲದ ವ್ಯಕ್ತಿಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಆತ ಹಿಂದೆ ಕೆಲಸ ಮಾಡುತ್ತಿದ್ದ ಸಂಸ್ಥೆ 29ಲಕ್ಷರೂಪಾಯಿ ನಷ್ಟಪರಿಹಾರ ನೀಡಬೇಕೆಂದು ಇಲ್ಲಿನ ಕೋರ್ಟು ತೀರ್ಪು ನೀಡಿದೆ.

 ಎ.ಎಕ್ಸ್.ಐ ಎನ್ನುವ ಸಿಂಗಪುರದ ಇನ್ಶೂರೆನ್ಸ್ ಕಂಪೆನಿ ಭಾರತೀಯ ಮೂಲದ ರಮೇಶ್ ಕೃಷ್ಣ ಎಂಬವರಿಗೆ ನಷ್ಟ ಪರಿಹಾರ ನೀಡಬೇಕಾಗಿದೆ. ಈ ಇನ್ಶೂರೆನ್ಸ್ ಕಂಪೆನಿ ಬೇರೊಂದು ಸಂಸ್ಥೆಗೆ ನೀಡಿದ ರೆಫರೆನ್ಸ್ ಲೆಟರ್‍ನಲ್ಲಿ ತಪ್ಪಾದ ವಿವರವನ್ನು ನೀಡಿದ್ದರಿಂದ ರಮೇಶ್ ಕೃಷ್ಣರಿಗೆ ಕೆಲಸ ಸಿಕ್ಕಿರಲಿಲ್ಲ.

ಇನ್ಶೂರೆನ್ಸ್ ಕಂಪೆನಿಯ ವರ್ತನೆಯನ್ನು ಪ್ರಶ್ನಿಸಿ ರಮೇಶ್ ಕೃಷ್ಣ ಕೋರ್ಟಿನ ಮೊರೆ ಹೋಗಿದ್ದರು. ರಮೇಶ್ ಮೊದಲು ನೀಡಿದ್ದ ಮಾನನಷ್ಟ ಪ್ರಕರಣ 2015ರಲ್ಲಿ ಕಂಪೆನಿಯ ಪರವಾಗಿ ತೀರ್ಪು ಬಂದಿತ್ತು. ನಂತರ ರಮೇಶ್‍ಕೃಷ್ಣ ಮೇಲ್ಮನವಿ ಸಲ್ಲಿಸಿದ್ದರು. ಇದರಲ್ಲಿ ರಮೇಶ್‍ರ ಪರ ತೀರ್ಪು ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News