ನರ ಬಲಿ: ದಂಪತಿಯ ಮರಣದಂಡನೆಗೆ ಸುಪ್ರೀಂ ತಡೆಯಾಜ್ಞೆ

Update: 2017-08-17 17:35 GMT

ಹೊಸದಿಲ್ಲಿ, ಆ. 17: ಎರಡು ವರ್ಷದ ಬಾಲಕನನ್ನು ಬಲಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿಗೆ ನೀಡಿದ್ದ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಮಾನವ ಬಲಿ ಪ್ರಕರಣಕ್ಕೆ ಸಂಬಂಧಿಸಿ ಈಸ್ವರಿ ಲಾಲ್ ಯಾದವ್ ಹಾಗೂ ಆತನ ಪತ್ನಿ ಕಿರಣ್ ಬಾಯಿಗೆ ಮರಣ ದಂಡನೆ ವಿಧಿಸಿ ಚತ್ತೀಸ್‌ಗಡ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ದಂಪತಿ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸ್ವೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News