‘ನೀತಿ‘ ತಂಡದಿಂದ ಚೀನಾ ವಸ್ತು ವಿರೋಧಿ ಅಭಿಯಾನ

Update: 2017-08-17 17:39 GMT

ಮಂಗಳೂರು, ಆ.17: ನಗರದ ‘ನೀತಿ’ ತಂಡವು ಚೀನಾ ವಸ್ತು ವಿರೋಧಿ ಅಭಿಯಾನವನ್ನು ಗುರುವಾರ ನಗರದಲ್ಲಿ ಆಯೋಜಿಸಿತ್ತು. ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಚಾಲನೆ ನೀಡಲಾದ ಈ ಅಭಿಯಾನಕ್ಕೆ ಜಿಲ್ಲಾಧಿಕಾರಿಯ ಪರವಾಗಿ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಮಾಣಿಕ್ಯರಿಗೆ ಗಿಡ ಹಸ್ತಾಂತರಿಸಲಾಯಿತು.

 ಜಿಲ್ಲೆಯ ವಿವಿಧ ಕಡೆಯಿಂದ ಆಗಮಿಸಿದ ‘ನೀತಿ’ ತಂಡದ ಸದಸ್ಯರು ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ, ಎಸ್ಪಿ ಕಚೇರಿ, ಮಿನಿ ವಿಧಾನಸೌಧ, ಮಂಗಳೂರು ಮಾರುಕಟ್ಟೆ ಮತ್ತಿತರ ಕಡೆ ಮೆರವಣಿಗೆ ಮೂಲಕ ತೆರಳಿ ಚೀನಾ ವಸ್ತು ವಿರೋಧಿ ಅಭಿಯಾನದ ಕರಪತ್ರ ಹಂಚಿದರು.

‘ನೀತಿ’ಯ ರಾಜ್ಯಾಧ್ಯಕ್ಷ ಜಯನ್ ಟಿ., ಕಾರ್ಯದರ್ಶಿ ಜೈಸನ್ ಜಾರ್ಜ್, ಕೋಶಾಧಿಕಾರಿ ಸುಜಿತ್ ಸಿ. ಪಿಲಿಪ್, ಪಿಯುಸಿಎಲ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಅಗಸ್ಟಿನ್, ಗಾರ್ಡಿಯನ್ ಬಿಲ್ಡರ್ಸ್‌ನ ಕೇಶವ ಗೌಡ, ಪಶ್ಚಿಮ ಘಟ್ಟ ನದಿ ಮೂಲ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News