ಆದಿತ್ಯನಾಥ ವಿರುದ್ಧ ಅವಮಾನಕಾರಿ ಹೇಳಿಕೆ:ಪ್ರಕರಣ ದಾಖಲು
Update: 2017-08-19 12:45 GMT
ಶಹಾಜಾನ್ಪುರ,ಆ.19: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ವ್ಯಕ್ತಿಯೋರ್ವನ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.
ಕಿಲಾಪುರ ನಿವಾಸಿ ಉಪದೇಶ ಯಾದವ ಸಮಾಜವಾದಿ ಎಂಬಾತ ಆರೋಪಿಯಾ ಗಿದ್ದು, ಈತ ಗುರುವಾರ ರಾತ್ರಿ ತನ್ನ ಫೇಸ್ಬುಕ್ ಪುಟದಲ್ಲಿ ಆದಿತ್ಯನಾಥರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ. ಈ ಬಗ್ಗೆ ಶನಿವಾರ ಬೆಳಿಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಮಿರ್ಝಾಪುರ ಠಾಣಾಧಿಕಾರಿ ವೀರೇಂದ್ರ ಚೌಹಾಣ್ ತಿಳಿಸಿದರು.