ಬಜ್ಪೆಯಲ್ಲಿ ಪೊಲೀಸ್ ಬೀಟ್ ಮಹಾಸಭೆ
Update: 2017-08-20 22:22 IST
ಮಂಗಳೂರು, ಆ. 20: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 47 ಗ್ರಾಮಗಳ ಸದಸ್ಯರುಗಳ ನವೀಕೃತ ಬೀಟ್ ಮಹಾಸಭೆಯು ರವಿವಾರ ಸಂಜೆ ಕೈಕಂಬದ ಮೇಘ ಪ್ಲಾಝಾದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಪಣಂಬೂರು ಎಸಿಪಿ ರಾಜೇಂದ್ರ ಮಾತನಾಡಿದರು. ಬಜ್ಪೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಪ್ರಾಸ್ತಾವಿಕವಾಗಿ ಮಾನತನಾಡಿದರು. 800ಕ್ಕೂ ಅಧಿಕ ನಾಗರಿಕರು ಸಭೆಯಲ್ಲಿ ಭಾಗವಹಿಸಿದ್ದರು.