ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕಾರ
Update: 2017-08-22 07:40 GMT
ಚೆನ್ನೈ, ಆ.21: ತಮಿಳುನಾಡಿನ ನೂತನ ಉಪಮುಖ್ಯ ಮಂತ್ರಿಯಾಗಿ ಎಐಎಡಿಎಂಕೆಯ ಓ.ಪನ್ನೀರ್ ಸೆಲ್ವಂ ಮತ್ತು ಸಂಪುಟ ಸಚಿವರಾಗಿ ಕೆ.ಪಾಂಡಿರಾಜನ್ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ಇಂದು ಸಂಜೆ ನಡೆದ ಸಮಾರಂಭದಲ್ಲಿ ಉಸ್ತುವಾರಿ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ಪ್ರಮಾಣ ವಚನ ಬೋಧಿಸಿದರು.
ನೂತನ ಕ್ಯಾಬಿನೆಟ್ ಸಚಿವ ಕೆ.ಪಾಂಡಿರಾಜನ್ ಅವರಿಗೆ ತಮಿಳು ಆಡಳಿತ ಭಾಷೆ ಹಾಗೂ ಸಂಸ್ಕೃತಿ ಖಾತೆ ನೀಡಲಾಗಿದೆ.