ಹೊಟೇಲ್ ಕಾರ್ಮಿಕನಿಗೆ ಮೆನೇಜರ್ ನಿಂದ ಹಲ್ಲೆ

Update: 2017-08-21 14:44 GMT

ಬಂಟ್ವಾಳ, ಆ. 21: ಬಿ.ಸಿ.ರೋಡ್ ನ ಹೊಟೇಲೊಂದರ ಕಾರ್ಮಿಕನಿಗೆ ಅದೇ ಹೊಟೇಲಿನ ಮೆನೇಜರ್ ಹಲ್ಲೆ ನಡಸಿದ ಘಟನೆ ನಡೆದಿದೆ.

ಬಸ್ ನಿಲ್ದಾಣದ ಬಳಿರುವ ಹೊಟೇಲ್ ನ ಕಾರ್ಮಿಕ ರಾಮಕೃಷ್ಣ ಎಂಬವರು ಹಲ್ಲೆಯಿಂದ ಕೈ ಮುರಿತಕ್ಕೊಳಗಾಗಿ ಬಂಟ್ವಾಳ ಸರಕಾರಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಟೇಲಿನ ಮೆನೇಜರ್ ಅಭಿಷೇಕ್ ಹಲ್ಲೆ ನಡೆಸಿದ್ದಾನೆಂದು ಆರೋಪಿಸಲಾಗಿದೆ. ರಾಮಕೃಷ್ಣ ಕಳೆದ ಎಂಟು ತಿಂಗಳಿನಿಂದ ಈ ಹೊಟೇಲಿನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News