ಕಡಬ ಗೃಹರಕ್ಷಕ ಘಟಕದಲ್ಲಿ ವನಮಹೋತ್ಸವ

Update: 2017-08-21 17:54 GMT

ಮಂಗಳೂರು, ಆ.21: ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲಿ ಮೋಹನ್ ಚೂಂತಾರು ಕಡಬ ಘಟಕಕ್ಕೆ ಭೇಟಿ ನೀಡಿ ಕವಾಯತು ವೀಕ್ಷಿಸಿದರು.

ಬಳಿಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರತಿಯೊಬ್ಬ ಗೃಹರಕ್ಷಕರು ತಮ್ಮ ತಮ್ಮ ಮನೆಗಳಲ್ಲಿ ಇರುವ ಖಾಲಿ ಜಾಗಗಳಲ್ಲಿ ಗಿಡಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಬೇಕು ಎಂದು ನುಡಿದರು.

 ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಕಡಬ ಘಟಕಾಧಿಕಾರಿ ಎಚ್.ಗೋಪಾಲ್, ಗೃಹರಕ್ಷಕ ದಳದ ಸಾರ್ಜೆಂಟ್ ತೀರ್ಥೇಶ್ ಹಾಗೂ ಕಡಬ ಘಟಕದ 25 ಗೃಹರಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News