ತ್ರಿವಳಿ ತಲಾಖ್: ನ್ಯಾಯಾಲಯದಲ್ಲಿ ರದ್ದತಿ ವಿರೋಧಿಸಿದ್ದ ಕಪಿಲ್ ಸಿಬಲ್‌ರಿಂದ ತೀರ್ಪಿಗೆ ಸ್ವಾಗತ

Update: 2017-08-22 14:17 GMT

ಹೊಸದಿಲ್ಲಿ,ಆ.22: ತ್ರಿವಳಿ ತಲಾಖ್ ಪದ್ಧತಿಯು ಅಸಿಂಧು ಮತ್ತು ಅಸಾಂವಿಧಾನಿಕ ವಾಗಿದೆ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮಂಗಳವಾರ ಹೊರಬಿದ್ದ ಬಳಿಕ ಈ ಪದ್ಧತಿಯನ್ನು ನಿಷೇಧಿಸುವುದನ್ನು ವಿರೋಧಿಸಿದ್ದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ)ಯ ಪರ ನ್ಯಾಯಾಲಯದಲ್ಲಿ ವಾದಿಸಿದ್ದ ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ತೀರ್ಪು ಸ್ವಾಗತಾರ್ಹವಾಗಿದೆ ಮತ್ತು ಇದು ಹಿನ್ನಡೆಯಲ್ಲ ಎಂದು ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಲ್, ತೀರ್ಪನ್ನು ನಾವು ಪ್ರಶಂಸಿಸುತ್ತೇವೆ. ಅದು ವೈಯಕ್ತಿಕ ಕಾನೂನುಗಳನ್ನು ರಕ್ಷಿಸಿದೆ ಮತ್ತು ಇದೇ ವೇಳೆ ತ್ರಿವಳಿ ತಲಾಖ್ ಪದ್ಧತಿಗೆ ಅಸಮ್ಮತಿ ಸೂಚಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News