​ಜೀವವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Update: 2017-08-22 15:30 GMT

ಮಂಗಳೂರು, ಆ. 22: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳ ವಿವಿಧೋದ್ದೇಶ ಸಹಕಾರಿ ಸಂಘದ 7ನೆ ವಾರ್ಷಿಕ ಮಹಾಸಭೆಯು ನಗರದ ರಾಧಾಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಕಳೆದ ಆರ್ಥಿಕ ವರ್ಷದಿಂದ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ದಿ.ಪಿ.ಜೆ.ಸಲ್ದಾನ ಅವರ ಸ್ಮರಣಾರ್ಥ ಎಸೆಸೆಲ್ಸಿ ಮತ್ತು ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ತನ್ನ ಸದಸ್ಯರ ಅರ್ಹ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಈ ಮಹಾಸಭೆಯಲ್ಲಿ 5 ಮಕ್ಕಳಿಗೆ ಈ ಪುರಸ್ಕಾರವನ್ನು ನೀಡಲಾಯಿತು.ಮಹಾಸಭೆಯ ಅಧ್ಯಕ್ಷತೆಯ್ನನು ವಹಿಸಿದ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ ಅವರು ಭಾರತೀಯ ಜೀವ ವಿಮಾ ನಿಗಮದ ಎಲ್ಲ ಪ್ರತಿನಿಧಿಗಳು ಸಹಕಾರಿ ಸಂಘದ ಸದಸ್ಯತ್ವ ಪಡೆದುಕೊಂಡು ಸಂಸ್ಥೆಯ ಬೆಳವಣಿಗೆಗೆ ಸಹಕರಿಸಲು ಕರೆ ನೀಡಿದರು.

ಸಹಕಾರಿ ಸಂಘದ ಉಪಾಧ್ಯ ಜಯಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಎ. ವಿಶ್ವನಾಥ್ ಗಟ್ಟಿ, ಸ್ಟ್ಯಾನಿ ಡಿಸೋಜ, ಪೀಟರ್ ಎ ಪಿಂಟೋ, ಕಾಶೀನಾಥ್ ಪುತ್ರನ್, ಕೊಡಂಗೆ ಬಾಲಕೃಷ್ಣ ನಾಯ್ಕಾ, ಕಿಶೋರ್ ಕುಟಿನ್ಹಾ, ಸುಷ್ಮಾ ಜನಾರ್ಧನ್, ಚಂದ್ರಕಾಂತ್, ಲೀಲಾವತಿ ಕೆ. ಸಿ.ವಿ. ಭಟ್, ಸುಬ್ರಹ್ಮಣ್ಯ ಭಟ್ ಎಚ್., ಎಂ. ಜಯರಾಮ್ ಭಂಡಾರಿ, ನಿವಾಸ್ ಕಣ್ವತೀರ್ಥ ಉಪಸ್ಥಿತರಿದ್ದರು.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಾಂತ್ ಸಿ.ಎಚ್. ವರದಿ ಹಾಗೂ ಲೆಕ್ಕಪತ್ರಗಳ ಮಂಡಿಸಿದರು. ಎ. ಶ್ವನಾಥ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News