ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ಉಚಿತ ಮಾಹಿತಿ ಶಿಬಿರ

Update: 2017-08-24 16:13 GMT

ಮಂಗಳೂರು, ಆ.24: ಪಂಜದ ಮಹಾತ್ಮ ಗಾಂಧಿ ವಿದ್ಯಾಪೀಠದ ವತಿಯಿಂದ ಐಎಎಸ್ ಮತ್ತು ಕೆಎಎಸ್ ಪರೀಕ್ಷಾ ಸಿದ್ಧತೆಗಾಗಿ ಐದು ತಾಲೂಕುಗಳಲ್ಲಿಯೂ ಉಚಿತ ಮಾಹಿತಿ ನೀಡಲಾಗುವುದು.

ಸುಳ್ಯ ತಾಲೂಕಿನ ಪಂಜದ ಸ್ನೇಹ ಸದನದಲ್ಲಿ ರವಿವಾರ ಬೆಳಗ್ಗೆ 10-12, ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣದ ಬಳಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಿಂಗಳ ನಾಲ್ಕನೆ ಶನಿವಾರ ಅಪರಾಹ್ನ 2-4, ಮಂಗಳೂರು ತಾಲೂಕಿನ ಹಂಪನಕಟ್ಟೆ ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ತಿಂಗಳ ಪ್ರಥಮ ಶನಿವಾರ ಅಪರಾಹ್ನ 2-4ರವರೆಗೆ, ಪುತ್ತೂರು ತಾಲೂಕಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅ. 2-4, ಬಂಟ್ವಾಳ ತಾಲೂಕಿನ ಗೂಡಿನ ಬಳಿ ಸರಕಾರಿ ಪದವಿ ಪೂರ್ವ ಕಾಲೇಜು ಜೋಡು ಮಾರ್ಗದಲ್ಲಿ ಅ. 2-4ರವರೆಗೆ ತರಬೇತಿ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಾವಿತ್ರಿ ಅಕಾಡೆಮಿ ಕುಕ್ಕಡೇಲು ಪೇರಾಲು,ಮಂಡೆಕೋಲು ಗ್ರಾಮ ಸುಳ್ಯತಾಲೂಕು ದ.ಕ.ದೂರವಾಣಿ 9449451328, 9986416811, 7760841307 ಮೂಲಕ ಸಂಪರ್ಕಿಸಬಹುದು ಎಂದು ವಿದ್ಯಾಪೀಠದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News