×
Ad

ಗಲಭೆ ನಿಯಂತ್ರಿಸಿ ಇಲ್ಲದಿದ್ದರೆ ಸಿಎಂ ಹುದ್ದೆ ತೊರೆಯಿರಿ : ಸಿಎಂ ಖಟ್ಟರ್ ಗೆ ಗೃಹ ಸಚಿವ ಖಡಕ್ ಎಚ್ಚರಿಕೆ

Update: 2017-08-25 19:41 IST

ಹೊಸದಿಲ್ಲಿ, ಆ. 25: ಹರಿಯಾಣದಲ್ಲಿ ಗಲಭೆ ನಿಯಂತ್ರಿಸಲು ಪೊಲೀಸ್ ಇಲಾಖೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಗೃಹ ಸಚಿವ ರಾಜ್ ನಾಥ್ ಸಿಂಗ್ ತೀವ್ರ ತರಾಟೆಗೆ ತೆಗದುಕೊಂಡಿದ್ದಾರೆ.

ರಾಮ್ ರಹೀಂ ಸಿಂಗ್ ಬೆಂಬಲಿಗರ ಹಿಂಸಾಚಾರವನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ ಮುಖ್ಯ ಮಂತ್ರಿ ಹುದ್ದೆಯನ್ನು ತೊರೆಯುವಂತೆ ಸಿಎಂಗೆ ಗೃಹ ಸಚಿವ ರಾಜ್ ನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಿಎಂಗೆ ತಕ್ಷಣ ಪಂಚಕುಲ ಕಚೇರಿಗೆ ಭೇಟಿ ನೀಡಿ , ಪರಿಸ್ಥಿತಿಯ ಬಗ್ಗೆ  ವರದಿ ನೀಡುವಂತೆ  ರಾಜ್ ನಾಥ್ ಸಿಂಗ್ ಸೂಚನೆ ನೀಡಿದ್ದಾರೆ.

ಪಂಚಕುಲದಲ್ಲಿ ಸಂಭವಿಸಿದ ಹಿಂಸಾಚಾರವನ್ನು ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಖಂಡಿಸಿದ್ದಾರೆ.

ಸಿಎಂ ಖಟ್ಟರ್ ಪಂಚಕುಲಕ್ಕೆ: ಕೇಂದ್ರ ಸರಕಾರದ ಸೂಚನೆಯ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಪಂಚಕುಲಕ್ಕೆ ಭೇಟಿ ನೀಡಿದ್ದಾರೆ. 

ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆ: ಪಂಚಕುಲದಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿದೆ. 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News