×
Ad

ಬಸ್ ಢಿಕ್ಕಿ: ಬೈಕ್ ಸವಾರರು ಮೃತ್ಯು

Update: 2017-08-26 19:45 IST

ಕಾಸರಗೋಡು, ಆ. 26: ಬಸ್ ಢಿಕ್ಕಿಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಆದೂರು ಬಳಿ ಸಂಜೆ ನಡೆದಿದೆ.

ಮೃತ ಬೈಕ್ ಸವಾರರನ್ನು ಸಾಬಿರ್ (22) ಹಾಗು ಇರ್ಷಾದ್ (22) ಎಂದು ಗುರುತಿಸಲಾಗಿದೆ.

ಏಣಿಯಾಡಿಯಲ್ಲಿ  ನಡೆಯುತ್ತಿರುವ  ಜಿಲ್ಲಾ ಎಸ್ಸೆಸ್ಸೆಫ್ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಬೈಕ್ ನಲ್ಲಿ  ತೆರಳುತ್ತಿದ್ದ ಸಂದರ್ಭ ಈ ಅಪಘಾತ ನಡೆದಿದೆ ಎಂದು ತಿಳಿದುಬಂದಿದೆ. ಅಪಘಾತ ನಡೆದ ಸಂದರ್ಭ ಓರ್ವ ಸ್ಥಳದಲ್ಲೇ  ಮೃತಪಟ್ಟು, ಇನ್ನೋರ್ವ ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಆದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News